ಕರ್ನಾಟಕ ದಲಿತ ಒಕ್ಕೂಟ ಸಮಿತಿ, ಕರ್ನಾಟಕ ಅಹಿಂದ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಕವಿ, ನಾಡೋಜ ದಿ. ಡಾ. ಸಿದ್ದಲಿಂಗಯ್ಯರವರ ದ್ವಿತೀಯ ವರ್ಷದ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಭಾಗವಹಿಸಿ ನಮನ ಸಲ್ಲಿಸಿದರು. ಆರ್.ಪಿ.ಐ. ಅಧ್ಯಕ್ಷ ಡಾ. ಎಂ. ವೆಂಕಟಸ್ವಾಮಿ, ಆರ್ಪಿಐ (ಬಿ) ರಾಷ್ಟ್ರಾಧ್ಯಕ್ಷ, ದಸಂಸ ರಾಜ್ಯಾಧ್ಯಕ್ಷ ಎನ್. ಮೂರ್ತಿ, ಅಹಿಂದ ಹೋರಾಟ ಸಮಿತಿ ಅಧ್ಯಕ್ಷ ಎಂ. ಮುತ್ತುರಾಜು ಉಪಸ್ಥಿತರಿದ್ದರು.