
ಹು-ಧಾ ಕೇಂದ್ರ-73 ಕ್ಷೇತ್ರದಲ್ಲಿ ಮುಸ್ಲಿಂ ಟಿಕೆಟ್ ಆಕಾಂಕ್ಷಿಗಳು ಸಾಕಷ್ಟು ಜನರಿದ್ದರೂ ಕಾಂಗ್ರೆಸ್ ಪಕ್ಷ ಕಡೆಗಣಿಸಿದೆ ಎಂದು ಖಂಡಿಸಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಅಂಜುಮನ್-ಎ-ಇಸ್ಲಾಂ ಸಂಸ್ಥೆ ಉಪಾಧ್ಯಕ್ಷ, ಹು-ಧಾ ಪಾಲಿಕೆ ಮಾಜಿ ಹಿರಿಯ ಸದಸ್ಯರಾದ ಅಲ್ತಾಫ ನವಾಜ ಎಂ. ಕಿತ್ತೂರ ನಾಮಪತ್ರ ಸಲ್ಲಿಸಿದರು. ಮೌಲಾನಾ ಆಫೀಜಿ, ಮಹ್ಮದ ಸಲೀಂ, ಷಾಬುದ್ದೀನ್ ಧಾರವಾಡ, ಅಸಲಮ್ ಮುಜಾಹಿದ್ ಮತ್ತಿತರರು ಉಪಸ್ಥಿತರಿದ್ದರು.