
ಅಯೋಧ್ಯಾ ನಗರ 1 ನೇ ಕ್ರಾಸ್ ನಲ್ಲಿ ಮಹಾ ನಗರ ಪಾಲಿಕೆ ಸಾಮಾನ್ಯ ಅನುದಾನದಡಿ ಯುಜಿಡಿ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಶೀಲಾ ಮಂಜುನಾಥ ಕಾಟಕರ, ಗಿರೀಶ ಕೈರಾತಿ, ವಿ.ಎಸ್. ಹಿರೇಮಠ, ಕಲ್ಮಮೇಶ ಬೆಟಸೂರ, ರಶೀದ್ ಮಾಣಿಕನಗರ, ಎಸ್.ಎಚ್. ಹಾಜಿಸಾಬ ಸವಣೂರು, ಅಶ್ಫಾಕ್ ಅಮ್ಮದ ಬಿಜಾಪುರಿ, ದೇವೇಂದ್ರ ಲಿಂಗದಾಳ, ಧಾನೇಶ ಠಾಕೂರ್, ದಾನೇಶ ಕೆ, ಮಂಜುನಾಥ ಲಕಾಜನವರ, ರವಿ ಕುರಿಗೌಡರ ಉಪಸ್ಥಿತರಿದ್ದರು.