
ನಗರದ ಉಣಕಲ್ ಕೆರೆ ಹತ್ತಿರದ ಸಿದ್ದಪ್ಪಜ್ಜನವರ ಹೊಸಮಠ ಕಲ್ಯಾಣ ಮಂಟಪದಲ್ಲಿಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ ವತಿಯಿಂದ ಹುಬ್ಬಳ್ಳಿ ನಗರ ತಾಲೂಕ 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಿವೃತ್ತ ಪ್ರಾಚಾರ್ಯ ಶಂಭು ಬಳಿಗಾರ ಉದ್ಘಾಟಿಸಿದರು. ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಸಾಹಿತಿ ಸಿ.ಬಿ. ಮರಿಗೌಡರ, ಕಾರ್ಯಾಧ್ಯಕ್ಷ ರಾಜಣ್ಣ ಕೊರವಿ, ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ, ನಗರ ಘಟಕ ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ, ಉಮೇಶಗೌಡ ಕೌಜಗೇರಿ, ಆರ್.ಎಂ.ಗೋಗೇರಿ, ಡಾ.ಗೋವಿಂದ ಮಣ್ಣೂರ, ಮಹಾಂತಪ್ಪ ನಂದೂರ, ಸದಾನಂದ ಡಂಗನವರ, ಚನ್ನಬಸಪ್ಪ ಧಾರವಾಡಶೆಟ್ಟರ, ಗಿರಿಜಾ ಚಿಕ್ಕಮಠ, ಸಂಧ್ಯಾ ದೀಕ್ಷಿತ.ಜಯಶ್ರೀ ಬೇವೂರ, ಬಸವರಾಜ ಮಾಳವಾಡ ಇನ್ನಿತರರು ಉಪಸ್ಥಿತರಿದ್ದರು.