5 ದಿನ ಆದಿಲ್ ಖಾನ್ ವಶಕ್ಕೆ

ಮೈಸೂರು: ಫೆ.23:- ಇಲ್ಲಿ ವಿದ್ಯಾರ್ಥಿಯಾಗಿದ್ದಾಗ ಇರಾನಿ ವಿದ್ಯಾರ್ಥಿಯನ್ನು ಅತ್ಯಾಚಾರ ಮಾಡಿದ ಪ್ರಕರಣವೊಂದರಲ್ಲಿ ಮೈಸೂರು ನ್ಯಾಯಾಲಯಕ್ಕೆ ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿಯನ್ನು ಮೈಸೂರಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಪೆÇಲೀಸ್ ಕಸ್ಟಡಿಗೆ ನೀಡಲಾಗಿದೆ.
ಕೌಟುಂಬಿಕ ಕಲಹ ಹಾಗೂ ಹಣ ವಂಚನೆಗೆ ಸಂಬಂಧಿಸಿ ನಟಿ ರಾಖಿಸಾವಂತ್ ನೀಡಿದ ದೂರಿನ ಆಧಾರದಲ್ಲಿ ಮುಂಬೈ ಪೆÇಲೀಸರು ಆದಿಲ್‍ನನ್ನು ಬಂದಿಸಿದ್ದರು. ಮಂಗಳವಾರ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈ ಮಧ್ಯೆ, ಮೈಸೂರಿನಲ್ಲಿ ಆದಿಲ್ ವಿರುದ್ಧ ಇರಾನಿ ವಿದ್ಯಾರ್ಥಿನಿ ನೀಡಿದ ಅತ್ಯಾಚಾರ ದೂರನ್ನಾಧರಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿ.ವಿ.ಪುರಂ ಪೆÇಲೀಸರು ಮುಂಬೈ ನ್ಯಾಯಾಲಯದಿಂದ ಆತನನ್ನು ವಶಕ್ಕೆ ಪಡೆದು, ಬುಧವಾರ ಮೈಸೂರಿಗೆ ಕರೆತಂದು ಇಲ್ಲಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಒಂದು ವಾರದ ಪೆÇಲೀಸ್ ಕಸ್ಟಡಿ ನೀಡಿದೆ.
ಬುಧವಾರ ಮೈಸೂರಿಗೆ ಆಗಮಿಸಿದ್ದ ರಾಖಿ ಸಾವಂತ್ ಹಾಗೂ ಅವರ ವಕೀಲರು ನ್ಯಾಯಾಲಯದಲ್ಲಿ ಆದಿಲ್ ವಿರುದ್ಧ ದೂರು ಸಲ್ಲಿಸಿ ಆತನಿಂದಾದ 165 ಕೋಟಿ ರೂ. ವಂಚನೆ, ದೌರ್ಜನ್ಯಯದ ಮಾಹಿತಿ ನೀಡಿದ್ದರು. ಆತನಿಗೆ ಜಾಮೀನು ನೀಡಬಾರದು ಎಂದು ಕೋರಿದ್ದರು. ?ಸಂತ್ರಸ್ತೆ ಇರಾನಿ ವಿದ್ಯಾರ್ಥಿನಿಗೆ ಬೆಂಬಲ ನೀಡಲು ಬಂದಿದ್ದೇನೆ. ಆದಿಲ್ ಇಂತಹ ಹಲವು ಕೃತ್ಯ ನಡೆಸಿದ್ದಾನೆ. ಆತನ ಮನೆಗೂ ಹೋಗಿದ್ದೆ. ಆದರೆ ನನ್ನನ್ನು ಸೊಸೆ ಎಂದು ಮನೆಮಂದಿ ಒಪ್ಪುತ್ತಿಲ್ಲ. ಧರ್ಮ ಅಡ್ಡಬರುತ್ತಿದೆ ಎಂದು ರಾಖಿ ಮಾಧ್ಯಮಗಳಿಗೆ ತಿಳಿಸಿದರು.
“ನನ್ನನ್ನು ಒಳ್ಳೆಯ ಮಾತುಗಳಿಂದ ಮರಳು ಮಾಡಿ ಆತ ನನಗೆ ವಂಚಿಸಿದ್ದಾನೆ. ನನ್ನನ್ನು ಕಾನೂನು ಪ್ರಕಾರ ಹಾಗೂ ಮುಸ್ಲಿಂ ಧರ್ಮದ ಪ್ರಕಾರ ಮದುವೆಯಾಗಿ, ನನ್ನ ಬಳಿ ಇದ್ದ 1.65 ಕೋಟಿ ರೂ. ಹಣವನ್ನೂ ಪಡೆದಿದ್ದಾನೆ. ನನ್ನ ಮೇಲೆ ಹಲ್ಲೆ ಮಾಡಿ, ನನ್ನನ್ನು ಸಾಯಿಸಲು ಯತ್ನಿಸಿದ್ದ”. “ಈತನಿಗೆ ಜಾಮೀನು ಸಿಗಬಾರದು. ನನಗೆ ನ್ಯಾಯ ಬೇಕು. ಆತನಿಗೆ ಶಿಕ್ಷೆ ಆಗಬೇಕು” ಎಂದು ಆಗ್ರಹಿಸಿದರು. “ಆದಿಲ್ ಅವರ ತಂದೆ ನಾನು ಹಿಂದೂ ಎಂಬ ಕಾರಣಕ್ಕೆ ನನ್ನನ್ನು ಸ್ವೀಕರಿಸುತ್ತಿಲ್ಲ. ಆದಿಲ್ ಒಬ್ಬ ವಂಚಕ” ಎಂದು ಹೇಳುತ್ತಾ ರಾಖಿ ಸಾವಂತ್ ಕಣ್ಣೀರು ಹಾಕಿದರು.