25 ಸಾವಿರ ಮನೆಗೆ ತೆರಳಿ ಅಂಗದಾನದ ಮಹತ್ವ ಕುರಿತು ಜನಜಾಗೃತಿ

(ಸಂಜೆವಾಣಿ ವಾರ್ತೆ)
ವಿಜಯಪುರ:ಆ.4: ದೇಶದಲ್ಲಿಯೇಇದೇ ಮೊದಲ 25 ಸಾವಿರ ಮನೆಮನೆಗಳಿಗೆ ತೆರಳಿ ಅಂಗದಾನದ ಮಹತ್ವದಕುರಿತುಜನಜಾಗೃತಿ ಮೂಡಿಸುವ ಮೂಲಕ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇಡೀಮ್ಡ್ ವಿಶ್ವವಿದ್ಯಾಲಯದ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ರಾಷ್ಟ್ರೀಯಅಂಗದಾನ ದಿನವನ್ನುಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ರಾಷ್ಟ್ರೀಯಅಂಗದಾನ ದಿನಾಚರಣೆ ಅಂಗವಾಗಿ ಬಿ.ಎಲ್.ಡಿ.ಇಡೀಮ್ಡ್ ವಿವಿ ವೈದ್ಯರು ಮತ್ತು ವಿದ್ಯಾರ್ಥಿಗಳು ನಾಲ್ಕು ತಂಡಗಳಲ್ಲಿ ನಗರದ ನಾಲ್ಕೂ ದಿಕ್ಕುಗಳಲ್ಲಿ ಕೈಗೊಂಡಜನಜಾಗೃತಿಜಾಥಾಕ್ಕೆ ವಿವಿ ಸಮಕುಲಾಧಿಪತಿಡಾ. ವಾಯ್. ಎನ್. ಜಯರಾಜ, ಕುಲಪತಿಡಾ. ಆರ್. ಎಸ್. ಮುಧೋಳ, ಪ್ರಾಚಾರ್ಯಡಾ. ಅರವಿಂದ ಪಾಟೀಲ ಜಂಟಿಯಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದಡಾ. ವಾಯ್. ಎನ್. ಜಯರಾಜ, ಅಂಗದಾನ ವಿಶ್ವದಲ್ಲೇಯೇ ಶ್ರೇಷ್ಠದಾನವಾಗಿದೆ. ಅಂಗಾಂಗಳ ವೈಫಲ್ಯದಿಂದ ಬಳಲುತ್ತಿರುವವರಿಗೆ ಅಂಗದಾನ ಮಾಡುವ ಮೂಲಕ ಜೀವನ ನೀಡಬಹುದುಎಂದು ಹೇಳಿದರು.
ಮನುಷ್ಯಜೀವನ ಸಾರ್ಥಕವಾಗಬೇಕಾದರೆಉತ್ತಮಆರೋಗ್ಯ ಮತ್ತುಉತ್ತಮ ನಡವಳಿಕೆ ಮುಖ್ಯವಾಗಿವೆ. ಉತ್ತಮಆರೋಗ್ಯ ಮತ್ತು ನಡವಳಿಕೆ ಮನುಷ್ಯನ ವ್ಯಕ್ತಿತ್ವವನ್ನುರೂಪಿಸುತ್ತವೆ. ಜನರಿಗೆರಕ್ತದಾನ ಮತ್ತು ನೇತ್ರದಾನದ ಬಗ್ಗೆ ಅರಿವುಇದೆ. ಆದರೆ, ಜೀವರಕ್ಷಕಇತರ ಅಂಗಗಳ ದಾನದ ಮಹತ್ವಗೊತ್ತಿಲ್ಲ. ಅಷ್ಟೇಅಲ್ಲ, ಅಂಗದಾನದ ವಿಧಾನ ಮತ್ತುಉಪಯೋಗದಕುರಿತುಜರಿಗೆ ಮಾಹಿತಿಯಕೊರತೆಇದೆ. ಈ ಬಗ್ಗೆ ಜನಜಾಗೃತಿ ಮೂಡಿಸುವ ಮೂಲಕ ನಾನಾ ಅಂಗಾಗ ವೈಫಲ್ಯದಿಂದ ಬಳಲುತ್ತಿರುವವರಿಗೆ ಜೀವದಾನ ನೀಡಬಹುದಾಗಿದೆಎಂದುಅವರು ತಿಳಿಸಿದರು.
ಸಂಬಂಧಿಕರಿಗೆಕಿಡ್ನಿಕೊಡುವುದರಿಂದಜೀವ ಉಳಿಸಬಹುದು. ವ್ಯಕ್ತಿ ಮೃತಪಟ್ಟರೆಆತನಅಂತ್ಯಕ್ರಿಯೆಯೊಂದೆಕೊನೆಯದಾರಿ ಎಂಬ ಮೂಢನಂಬಿಕೆಯಿಂದ ಹೊರಬರಬೇಕಿದೆ. ಯಾವುದೇ ವ್ಯಕ್ತಿ ನಿಧನ ಹೊಂದಿದ ಬಳಿಕವೂ ಆತನದೇಹದಿಂದ ಬಳಸಬಹುದಾದ ಅಂಗಾಂಗಳನ್ನು ದಾನ ಮಾಡಿದರೆ ಈ ಅಂಗಾಂಗಳು ಅಗತ್ಯವಿರುವರೋಗಿಯನ್ನು ಬದುಕಿಸಬಹುದು. ಮೆದುಳು ನಿಷ್ಕ್ರೀಯವಾಗಿರುವ ವ್ಯಕ್ತಿಯೊಬ್ಬರಎರಡುತಲಾಎರಡುಕಣ್ಣು, ಶ್ವಾಸಕೋಶ, ಕಿಡ್ನಿ, ಹೃದಯ ಮತ್ತು ಲಿವರ್‍ದಾನ ಮಾಡುವ ಮೂಲಕ ಎಂಟುಜನರಿಗೆ ಮರುಜನ್ಮ ನೀಡಬಹುದಾಗಿದೆ. ನಿಧನ ಹೊಂದಿದ ವ್ಯಕ್ತಿಯದೇಹಕ್ಕೆ ಬೆಲೆ ಎಂಬುದರಕುರಿತುಜನಜಾಗೃತಿ ಮೂಡಿಸಬೇಕುಎಂದುಅವರು ಹೇಳಿದರು.
ವಿವಿ ಕುಲಪತಿಡಾ. ಆರ್. ಎಸ್. ಮುಧೋಳ ಮಾತನಾಡಿ, ಜನರಿಗೆಅಂಗದಾನದ ವಿಧಾನ, ಮಹತ್ವ ಮತ್ತುಚಿಕಿತ್ಸೆಯಕುರಿತು ಮನವರಿಕೆ ಮಾಡಿಕೊಡಬೇಕು. ವೈದ್ಯರು ಮತ್ತು ವಿದ್ಯಾರ್ಥಿಗಳು ತಮ್ಮಲ್ಲಿರುವಜ್ಞಾನವನ್ನುಜನಸಾಮಾನ್ಯರೊಂದಿಗೆ ಹಂಚಿಕೊಳ್ಳಬೇಕು. ಓರ್ವ ವ್ಕತ್ಯಿಯಿಂದಎಷ್ಟುಜನರಿಗೆಉಪಯೋಗವಾಗಬುಹುದುಎಂಬುದನ್ನು ತಿಳಿಸಬೇಕು. ವಿವಿಯಕುಲಾಧಿಪತಿ ಎಂ. ಬಿ. ಪಾಟೀಲ ಅವರಜನಪರ ಕಾಳಜಿಯ ಹಿನ್ನೆಲೆಯಲ್ಲಿ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿಆಸ್ಪತ್ರೆಯಲ್ಲಿಕಿಡ್ನಿ ಮತ್ತುಕಾರ್ನಿಯಾ ಕಸಿಗೆ ಅವಕಾಶ ಒದಗಿಸಲಾಗಿದೆ. ಸರಕಾರಿಆರೋಗ್ಯ ವಿಮೆ ಯೋಜನೆಗಳ ಮೂಲಕವೂ ಚಿಕಿತ್ಸೆ ಪಡೆಯಬಹುದುಎಂಬುದರ ಬಗ್ಗೆ ಮಾಹಿತಿ ನೀಡಬೇಕುಎಂದು ಹೇಳಿದರು.
ಆಸ್ಪತ್ರೆಯ ಯುರಾಲಜಿ ವಿಭಾಗದ ಮುಖ್ಯಸ್ಥಡಾ. ಎಸ್. ಬಿ. ಪಾಟೀಲ ಮಾತನಾಡಿ, ದೇಶದಲ್ಲಿ ಪ್ರತಿವರ್ಷ ನಾನಾ ಅಂಗಾಂಗಳ ಬೇಡಿಕೆಗೆತಕ್ಕಷ್ಟು ಅಂಗಗಳು ಸಿಗದ ಕಾರಣ ಲಕ್ಷಾಂತರಜನರುಸಾವಿಗೀಡಾಗುತ್ತಿದ್ದಾರೆ. ಅಂಗದಾನದ ಬಗ್ಗೆ ಅರಿವು ಮೂಡಿಸಿದರೆ ಈ ಕೊರತೆಯನ್ನುತಕ್ಕಮಟ್ಟಿಗೆತಡೆದುಜೀವದಾನ ಮಾಡಬಹುದಾಗಿದೆಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯಡಾ. ಅರವಿಂದ ಪಾಟೀಲ ಮಾತನಾಡಿ, ಈ ಜನಜಾಗೃತಿಜಾಥಾದ ಮೂಲಕ ಜನರುದೇಹದಾನ ಮಾಡಲು ಪೆÇ್ರೀತ್ಸಾಹಿಸಬೇಕು. ಅಂಗದಾನ ನೋಂದಣಿ ವಿಧಾನ, ಅಗತ್ಯ ದಾಖಲೆಗಳನ್ನು ಸಂಗ್ರಹಿಸುವ ಮೂಲಕ ಈ ವಿನೂತನಯೋಜನೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ಡಾ. ಅರವಿಂದ ಪಾಟೀಲ ಮತ್ತುಡಾ. ಮನೋಜ ವೈದ್ಯತಂಡ ನಗರದಉತ್ತರ ಭಾಗದಲ್ಲಿಐಶ್ರವರ್ಯ ನಗರ, ಗುರುರಾಜ ಕಾಲನಿ ಮತ್ತೀತರಕಡೆ, ಡಾ. ಉದಯಕುಮಾರ ನುಚ್ಚಿ ಮತ್ತುಡಾ. ದಯಾನಂದ ಬಿರಾದಾರ ನಗರದದಕ್ಷಿಣ ಭಾಗದ ವಜ್ರಹನುಮಾನ ನಗರ, ಜಲನಗರ, ಡಾ. ಸಂದೀಪ ಯಂಕಂಚಿ, ಮತ್ತುಡಾ. ಸಂತೋಷ ನಂದಿ ಹಾಗೂ ಡಾ. ಸಂತೋಷ ಪಾಟೀಲ ನೇತೃತ್ವದ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ನಗರದ ಪೂರ್ವ ಮತ್ತು ಪಶ್ಚಿಮ ಭಾಗದ ನಾನಾ ಬಡಾವಣೆಗಳ 25000 ಮನೆಮನೆಗಳಿಗೆ ತೆರಳಿ ಅಂಗದಾನದ ವಿಧಾನ, ಮಹತ್ವದಕುರಿತುಜಾಗೃತಿ ಮೂಡಿಸಿರು.
ಈ ಸಂದರ್ಭದಲ್ಲಿ ವಿವಿ ರಜಿಸ್ಟ್ರಾರ್‍ಡಾ. ರಾಘವೇಂದ್ರ ವಿ. ಕುಲಕರ್ಣಿಉಪಪ್ರಾಚಾರ್ಯಡಾ. ಎಂ. ಬಿ. ಪಾಟೀಲ, ವೈದ್ಯಕೀಯಅಧೀಕ್ಷಕಡಾ. ರಾಜೇಶ ಹೊನ್ನುಟಗಿ, ಡಾ. ವಿನಯಕುಂದರಗಿ ಮುಂತಾದವರು ಉಪಸ್ಥಿತರಿದ್ದರು.