18 ನೇ ವಾರ್ಡಿನಲ್ಲಿ ಲಕ್ಷ್ಮೀ ಅರುಣಾ ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.10:  ನಗರದ 18 ನೇ  ವಾರ್ಡಿನ ಸತ್ಯನಾರಾಯಣ ಪೇಟೆ, ಡಿಎಆರ್  ಮನೆ ಮನೆಗೆ ತೆರಳಿ ನಿನ್ನೆ ಸಂಜೆ  ಕೆ.ಆರ್.ಪಿ ಪಕ್ಷದ ನಗರ ಅಭ್ಯರ್ಥಿ ಲಕ್ಷ್ಮೀ ಅರುಣ ಜನಾರ್ಧನರೆಡ್ಡಿ  ಪ್ರಚಾರ ನಡೆಸಿದರು
ಈ ಸಂದರ್ಭದಲ್ಲಿ ಮತದಾರರು   ಜನಾರ್ಧನರೆಡ್ಡಿ ಅವರ ಕಾಲದ ಅಭಿವೃದ್ಧಿ  ಬಗ್ಗೆ ಮಾತನಾಡಿದ ಪ್ರತಿ ಮಾತು ನನಗೆ ತೋರಿದ ಪ್ರೀತಿಗೆ ಚಿರ ಋಣಿಯಾಗಿದ್ದೇನೆಂದರು.
ಮುಖಂಡರಾದ  ಪಾಲ್ ರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ,  ರಾಕೇಶ್, ಮುರಳಿ, ವೆಂಕಟೇಶ,  ಶ್ರೀನಿವಾಸ,  ಸುನೀತ ಮೊದಲಾದವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.