ಇಂಡಿ:ಸೆ.23: 12ನೇ ಶತಮಾನದ ಕ್ರಾಂತಿಕಾರಕ ಯುಗವಾಗಿದ್ದು ಶರಣರ ,ಸಂತರ ಸಮಾಜಿಕ ಸುಧಾರಕರ ಯುಗ ಎಂದರೆ ತಪ್ಪಾಗುವುದಿಲ್ಲ ಎಂದು ಕದಳಿ ವೇದಿಕೆ ಅಧ್ಯಕ್ಷ ಗಂಗಾಬಾಯಿ ಗಲಗಲಿ ಹೇಳಿದರು.
ಪಟ್ಟಣದ ಶ್ರೀಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಕದಳಿ ವೇದಿಕೆ ಇಂಡಿ, ಮನೆಗಳಲ್ಲಿ ಶರಣರ ಸಂದೇಶ 25ನೇ ಬೆಲ್ಳಿ ಹಬ್ಬ ಮತ್ತು 25ಜನ ಶಿಕ್ಷಕರಿಗೆ ಕದಳಿಶ್ರೀ ಪ್ರಶೆಸ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿವಶರಣರು, ಶರಣರು ಪದವನ್ನು ಶಿವನ ಭಕ್ತರು ಎಂದು ಸ್ಥೂಲವಾಗಿ ಹೇಳಬಹುದು, 12ನೇ ಶತಮಾನದ ವಚನಕಾರರು ಎಂದು ಕರೆಯುತ್ತಾರೆ. ಶರಣರು ಭಗವಂತನ ಸಂಕಲ್ಪಕ್ಕೆ ಶರಣಾದ ವ್ಯಕ್ತಿ ಶರಣರು. ಬಸಣ್ಣ ,ಅಲಂಪ್ರಭು, ಅPಕ್ಕಮಹಾದೇವಿ, ಮಡಿವಾಳ ಮಾಚೀದೇವ ರಚಿಸಿದ ವಚನಗಳಲ್ಲಿ ಶರಣರ ಸಂಸ್ಕøತಿ ನೋಡಬಹುದು. ಶರಣರು ವಚನಗಳು ಇಂದಿನ ಸಮಾಜಕ್ಕೆ ಪ್ರಸ್ತುತ ಮೋಢನಂಬಿಕೆ ಗೋಢು ಸಂಪ್ರದಾಯ ತೀಲಾಂಜಲಿ ನೀಡಿ ದಯವಿಲ್ಲದ ಧರ್ಮ ಯಾವುದಯ್ಯಾ. ನುಡಿದರೆ ಮುತ್ತಿನ ಹಾರದಂತಿರಬೇಕು. ನಡೇತೀರ್ಥ ನುಡಿ ತೀರ್ಥ ಸನ್ನುಡಿ ಸಂಗವದು ತೀರ್ಥ ಹೀಗೆ ಹಲವಾರು ವಚನಗಳ ಮೂಲಕ ಸಮಸಮಾಜ ಹಾಗೂ ಮಾನವರ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಿದ್ದಾರೆ ,ಇಂದು ಶರಣರ ವಚನಗಳು ಪ್ರತಿಮನೆಮನೆ ಮನಗಳಲ್ಲಿ ಬಿತ್ತರಿಸಿ ಅದರ್ಶ ಸಮಾಜ ಕಟ್ಟುವಲ್ಲಿ ನಾವೇಲ್ಲರೂ ಶ್ರಮಿಸೋಣ ಎಂದರು.
ಡಾ,ಸ್ವರೂಪಾನಂದ ಮಹಾಸ್ವಾಮಿಗಳು ಆರ್ಶೀವಚ ನೀಡಿದರು,
ಕದಳಿ ವೇದಿಕೆ ಅಧ್ಯಕ್ಷ ಗಂಗಾ ಗಲಗಲಿ ಆಶೇಯನುಡಿಗಳಾಡಿದರು.
ನಿವೃತ್ತ ಪ್ರಾಚಾರ್ಯ ಶೈಲಜಾ ತೆಲ್ಲೂರ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ,ಎಸ್ ಆಲಗೂರ ಕಾರ್ಯಕ್ರಮ ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಎಸ್ .ಎಸ್ ಕಲಘಟಗಿ, ಎ.ಆಯ ಸುಣಗಾರ, ಬಿ.ಎಸ್ ಪಾಟೀಲ, ಎಸ್ ಎಸ್ ಸುಗೂರ, ಶಾರದಾ ಹಿರೇಮಠ, ಬಿ.ಎಸ್ ಪೊಲೀಸ್ಪಾಟೀಲ, ರಿಯಾನಾ ಫಾಸ್ಟ್, ಭವಾನಿ ಗುಳೇದಗುಡ್ಡ, ಬಿ.ಈ ಹಿರೇಮಠ, ಪಾರ್ವತಿ ದಳವಾಯಿ, ಕದಳಿ ವೇದಿಕೆಯ ಎಲ್ಲಾ ಸರ್ವಸದಸ್ಯರು ಆಡಳಿತ ಮಂಡಳಿ ಶಿಕ್ಷಕರು ವೇದಿಕೆಯಲ್ಲಿದ್ದರು.