1 ತಿಂಗಳಲ್ಲಿ 57 ಲಕ್ಷಕ್ಕಿಂತ ಅಧಿಕ ಮೌಲ್ಯದ ಮದ್ಯ ವಶ

ವಿಜಯಪುರ,ಏ 8: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಚುನಾವಣಾ ಆಯೋಗ ನೀಡಿದ ಸೂಚನೆಯಿಂದ ಜಿಲ್ಲೆಯಲ್ಲಿ ಮದ್ಯ ಮಾರಾಟ ಹಾಗೂ ಸಾಗಾಣಿಕೆ ಮೇಲೆ ಅಬಕಾರಿ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕಾರಣ ಕೇವಲ 1ತಿಂಗಳಲ್ಲಿ 57 ಲಕ್ಷಕ್ಕಿಂತ ಅಧಿಕ ಮೌಲ್ಯದ ಮದ್ಯ ಹಾಗೂ ಅದಕ್ಕೆ ಬಳಸುವ ವಸ್ತುಗಳನ್ನು ವಶ ಪಡಿಸಿಕೊಂಡು 115 ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದು ಗಮನಿಸಿದರೆ ಈ ಬಾರಿ ಮತದಾರರಿಗೆ ಮದ್ಯ ಆಮಿಷ ತೋರುವವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದು ಚುನಾವಣೆಯ ಬಹು ದೊಡ್ಡ ಅಕ್ರಮಕ್ಕೆ ಕಡಿವಾಣ ಹಾಕಿದಂತಾಗಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಪುಲ್ ಅಲರ್ಟ್ ಆಗಿದ್ದ ಅಬಕಾರಿ ಇಲಾಖೆ ಎರಡು ಕಾಯಂ ಚೆಕ್ ಪೆÇೀಸ್ಟ್ ಹೊರತು ಪಡಿಸಿ, ಹೆಚ್ಚುವರಿ ಯಾಗಿ ಇನ್ನೂ 7ಸೇರಿ ಒಟ್ಟು 9 ಚೆಕ್ ಪೆÇೀಸ್ಟ್ ನಿರ್ಮಿಸಿ ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯದಿಂದ ಅಕ್ರಮ ಮದ್ಯ ಸಾಗಾಣಿಕೆ ಮಾಡದಂತೆ ನಿಬರ್ಂಧ ಹೇರಿ 1 ತಿಂಗಳಲ್ಲಿ ಅಪಾರ ಪ್ರಮಾಣದ ವಿವಿಧ ಬ್ಯ್ರಾಂಡ್ ಮದ್ಯ ಹಾಗೂ ಸಾಗಾಣಿಕೆಗೆ ಬಳಸುವ ವಾಹನ ಜಪ್ತಿ ಮಾಡಿದೆ. ಸದ್ಯ ಈ ಸಂಬಂಧ 185ಪ್ರಕರಣ ದಾಖಲಿಸಿದ್ದು, ವಿವಿಧೆಡೆ ಸೇರಿ 216 ದಾಳಿ ನಡೆಸಿದೆ. 115 ಆರೋಪಿಗಳನ್ಜು ಬಂಧಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ ಮಾಹಿತಿ ನೀಡಿದ್ದಾರೆ.
ಒಟ್ಟು 2151.45. ಲೀಟರ್ ಹಾಗೂ ಹೊರರಾಜ್ಯದಿಂದ ಸಾಗಿಸುತ್ತಿದ್ದ 25 ಲೀಟರ್ , ಕಳ್ಳಭಟ್ಟಿ ಸೇರಿ 11574.45 ಲೀಟರ್ ಮದ್ಯ ವಶ ಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಅಂದಾಜು 57.74ಲಕ್ಷ ರೂ. ಮೌಲ್ಯದ್ದಾಗಿದೆ.
ಅಕ್ರಮ ಮದ್ಯ ಸಾಗಿಸಲು ಬಳಸಿದ್ದ 32 ವಾಹನಗಳು 36.95ಲಕ್ಷ ಸೇರಿ ಇಲ್ಲಿಯವರೆಗೆ 94, 69ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಒಂದು ತಿಂಗಳ ಅವಧಿಯಲ್ಲಿ ವಶ ಪಡಿಸಿಕೊಂಡಿದೆ.
ಮದ್ಯ ಮಾರಾಟದಲ್ಲಿ ಹೆಚ್ಚಳವಿಲ್ಲ:
ಪ್ರತಿ ವರ್ಷ ಜಿಲ್ಲೆಯಲ್ಲಿ ಹೋಲಸೆಲ್ ಹಾಗೂ ಬಾರ್ ಗಳಲ್ಲಿ ಮದ್ಯ ಮಾರಾಟ ಹೆಚ್ಚಳವಾಗುತ್ತಿತ್ತು. ಆದರೆ ಈ ವರ್ಷ ಅದು ಕಂಡು ಬಂದಿಲ್ಲ. ಕಳೆದ ವರ್ಷ 15.7ಲಕ್ಷ ಬಾಕ್ಸ್ ಹಾಗೂ ಈ ವರ್ಷ 16.13ಲಕ್ಷ ಬಾಕ್ಸ್ ಮಾರಾಟ ಮಾಡ ಲಾಗಿದೆ.
ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ಹಾಗೂ ಹೆಚ್ಚು ರಜೆಗಳು ಇರುವ ಕಾರಣ ಮಾರ್ಚ್ ಒಂದೇ ತಿಂಗಳಲ್ಲಿ 16ಸಾವಿರ ಬಾಕ್ಸ್ ಮಾರಾಟವಾಗಿದೆ.
ಕಳ್ಳಭಟ್ಟಿ ನಿಯಂತ್ರಣಕ್ಕೆ ಕ್ರಮ:
ಜಿಲ್ಲೆಯಲ್ಲಿ ಕಳ್ಳಭಟ್ಟಿ ಕಾಯಿಸುವದು, ಮಾರಾಟ ಮಾಡುವದು ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶವಿದೆ. ಕಳ್ಳಭಟ್ಟಿ ಸೇವಿಸಿ ಸಾಯುವ ಪ್ರಕರಣ ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ ನಡೆದಿವೆ. ಅದು ಇಲ್ಲಿಯೂ ಮರುಕಳಿಸದಂತೆ ಪ್ರತಿ ವಾರ ಕಳ್ಳಭಟ್ಟಿ ಅಡ್ಡೆಯ ಮೇಲೆ ದಾಳಿ ನಡೆಸಿ, ಈ ಹಿಂದೆ ಪ್ರಕರಣದಲ್ಲಿ ಬಂಧಿಸಿದವರನ್ನು ಪುನ: ವಶಕ್ಕೆ ಪಡೆದು ಅವರಿಗೆ ಎಚ್ಚರಿಕೆ ನೀಡುವ ಕೆಲಸ ಸಹ ಮಾಡಲಾಗುತ್ತಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಹಲವು ದುಬಾರಿ ಬ್ರ್ಯಾಂಡ್ ಮದ್ಯ ಬೆಲೆ ಕಡಿಮೆ ಮಾಡಲಾಗಿದೆ. ಇದು ಕರ್ನಾಟಕದ ಗಡಿಭಾಗದಲ್ಲಿ ಯಾವುದೇ ಪರಿಣಾಮ ಬೀರಿಲ್ಲ, ಕಡಿಮೆ ಬೆಲೆಯ ಲಿಕ್ಕರ್ ಬೆಲೆ ಕರ್ನಾಟಕಕ್ಕಿಂತ ಹೆಚ್ಚು ಇರುವ ಕಾರಣ ಅಲ್ಲಿಂದ ಸಾಗಾಣಿಕೆಯಾಗುವದು ಕಡಿಮೆಯಾಗಿದೆ. ಸದ್ಯ ಚುನಾವಣೆಗೆ ಇನ್ನೂ ತಿಂಗಳು ಬಾಕಿ ಇರುವ ಕಾರಣ ಅಕ್ರಮ ಮದ್ಯ ಸಾಗಾಣಿಕೆ, ತಡೆಗೆ ಅಬಕಾರಿ ಇಲಾಖೆ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.