೧೪ ಮೊಬೈಲ್ ಆಪ್ ನಿಷೇಧ

ನವದೆಹಲಿ,ಮೇ.೧- ದೇಶದ ಆಂತರಿಕೆ ಭದ್ರತೆ ಮತ್ತು ಸುರಕ್ಷತೆಯ ಕಾರಣಕ್ಕಾಗಿ ಕೇಂದ್ರ ಸರ್ಕಾರ ೧೪ ಮೊಬೈಲ್ ಮೆಸೆಂಜರ್ ಆಪ್‌ಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಭಯೋತ್ಪಾದಕ ಗುಂಪುಗಳು ಬಳಸುವ೧೪ ಮೊಬೈಲ್ ಮೆಸೆಂಜರ್ ಆಪ್‌ಗಳನ್ನು ನಿರ್ಬಂಧಿಸಿದ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಮೆಸೆಂಜರ್ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದ ಭಯೋತ್ಪಾದಕ ಸಂಘಟನೆಗಳಿಕೆ ಕೈ ಕಟ್ಟಿಹಾಕಿದಂತಿದೆ.
ಪಾಕಿಸ್ತಾನದಿಂದ ಸಂದೇಶವನ್ನು ಹರಡಲು ಮತ್ತು ಸಂದೇಶಗಳನ್ನು ಸ್ವೀಕರಿಸಲು ಭಯೋತ್ಪಾದಕರು ಈ ಮೊಬೈಲ್ ಮೆಸೆಂಜರ್ ಅಪ್ಲಿಕೇಶನ್‌ಗಳನ್ನು ಬಳಸಿದ್ದಾರೆ ಎಂದು ಗುಪ್ತಚರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಈ ೪ ಮೆಸೆಂಜರ್ ಆಪ್‌ಗಳನ್ನು ನಿರ್ಬಂಧಿಸಿದೆ,
ವರದಿಯ ಪ್ರಕಾರ, ಈ ಮೆಸೆಂಜರ್ ಅಪ್ಲಿಕೇಶನ್‌ಗಳನ್ನು ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕ ಗುಂಪುಗಳು ಬಳಸುತ್ತಿದ್ದವು ಎಂದು ಉನ್ನತ ಮೂಲಗಳು ಮಾಹಿತಿ ಹಂಚಿಕೊಂಡಿದೆ.ಸಶ ನಿರ್ಬಂಧಿಸಲಾದ ಮೊಬೈಲ್ ಮೆಸೆಂಜರ್ ಅಪ್ಲಿಕೇಶನ್‌ಗಳ ಅಪ್ಲಿಕೇಶನ್‌ಗಳ ಹೆಸರುಗಳನ್ನು ಪಟ್ಟಿ ಮಾಡಲಾಗಿಲ್ಲ. ಆದಾಗ್ಯೂ,
ಸಿರಿಪ್ವಿಸೆರ್, ಎನಿಗ್ಮಾ, ಸಫೆಸ್ವಿಸ್ಸ್, ವಿಕ್ರ್ಮ್, ಮೆಡಿಅಫೀರ್, ಬ್ರಿಯಾರ್, ಬಿಛಾತ್, ನನ್ದಬೋಸ್, ಕಾಂಯ್ವ್ನ್, ಇಮೋ, ಎಲಿಮೆಂಟ್, ಸೆಕೆಂಡ್ ಲೈನ್, ಝಣ್ಗಿ, ತ್ರೀಮ ಸೇರಿದಂತೆ ಇತರ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ ಎಂದು ಮೂಲವೊಂದು ತಿಳಿಸಿದೆ.
ಕಾಶ್ಮೀರದಲ್ಲಿನ ಭಯೋತ್ಪಾದಕರು ತಮ್ಮ ಬೆಂಬಲಿಗರು ಮತ್ತು ನೆಲದ ಕೆಲಸಗಾರರೊಂದಿ ಸಂವಹನ ನಡೆಸಲು ಈ ಅಪ್ಲಿಕೇಶನ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ.