
ಸಂಜೆವಾಣಿ ವಾರ್ತೆ
ಹೊಸಪೇಟೆ, ಮೇ.25: ಹೊಸಪೇಟೆ ಶಾಸಕರ ಬದಲಾವಣೆ ನಗರಸಭೆಯ ಅಧಿಕಾರವೂ ಬದಲಾಗುತ್ತದೆ ಎಂಬುದು ಗಾಳಿ ಸುದ್ಧಿ ಯಾವುದೆ ಆದಾರ ರಹಿತವಾದದ್ದು ಎಂದು ನಗರಸಭೆಯ ಅಧ್ಯಕ್ಷ ಸುಂಕಮ್ಮ ಹಾಗೂ ಉಪಾಧ್ಯಕ್ಷ ಎಲ್.ಎಸ್.ಆನಂದ ಜಂಟಿ ಹೇಳಿಕೆಯಲ್ಲಿ ತಳ್ಳಿಹಾಕಿದರು.
ಹೊಸಪೇಟೆ ನಗರಸಭೆಯ ಸಾಮಾನ್ಯ ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ
ಅವರು ಹೊಸಪೇಟೆ ನಗರಸಭೆ ಬಿಜೆಪಿಯ ಸ್ಪಷ್ಟ ಬಹುಮತವಿದ್ದು ಬದಲಾವಣೆ ಸಾಧ್ಯವಿಲ್ಲ ಎಲ್ಲ ಸದಸ್ಯರ ಸಹಕಾರ ಹಾಗೂ ಸಲಹೆಗಳಂತೆ ನಗರದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದ್ದು ಇಂತಹ ಯಾವುದೆ ವಿಚಾರ ಪಕ್ಷದ ಮುಂದಿಲ್ಲಾ ಪಕ್ಷೇತರರು ಬಿಜೆಪಿ ಸೇಪರ್ಡೆಯಿಂದ ಸ್ಪಷ್ಟಬಹುಮತ ಪಕ್ಷಕ್ಕಿದ್ದು ಇಂತಹ ಯಾವುದೆ ವಿಚಾರವಿಲ್ಲಾ ಎಂದು ಇದು ಕೇವಲ ಗಾಳಿಸುದ್ಧಿ ಎಂದು ತಳ್ಳಿಹಾಕಿದರು.
ನಮ್ಮ ಅಧಿಕಾರಾವಧಿ ಇರುವ ವರೆಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇವೆ ಅವಧಿ ಮುಗಿಯುತ್ತಿದ್ದಂತೆ ಒಂದು ಕ್ಷಣವೂ ನಿಲ್ಲದೆ ಅಧಿಕಾರದಿಂದ ಇಳಿದು ಸದಸ್ಯರಾಗಿ ಪಕ್ಷದ ಅಣತಿಯಂತೆ ಸದಸ್ಯರಾಗಿ ಸೇವೆ ಮಾಡುತ್ತೇವೆ ಎಂದರು.