
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.05: ತಾಲ್ಲೂಕಿನ ಹೆರಕಲ್ಲು ಗ್ರಾಮದ ಶ್ರೀ ಬಳಗಾನೂರು ಮರಿಶಿವಯೋಗಿಗಳ ಮಠದ ಪರಮ ಪೂಜ್ಯರಾದ ಶ್ರೀಚಿದಾನಂದಯ್ಯ ತಾತನವರು ನಿನ್ನೆ ಸಂಜೆ ಲಿಂಗೈಕರಾಗಿರುತ್ತರೆ.
ಪರಮಪೂಜ್ಯರು ದೇವಿ ಅರಾಧಕರಾಗಿದ್ದು, ವಾಕ್ಸಿದ್ದಿ ಪುರುಷರಾಗಿದ್ದು, ಮೌನತಪಸ್ವಿಗಳಾಗಿದ್ದು, ಹೆರಕಲ್ಲು, ಕೆಂಚನಗುಡ್ಡ ,ಕೆಂಚನಗುಡ್ಡ ತಾಂಡ , ನಿಟ್ಟೂರು , ಉಡೆಗೋಳ, ಖರ್ಚಿಗನೂರು , ಸಿರಗುಪ್ಪ, ತೆಕ್ಕಲಕೋಟೆ , ಹಳೆಕೋಟೆ, ನಡುವೆ ಎನ್ಸೋಗುರು ಸಿರಿಗೆರೆ, ನಾಡಂಗ, ಸಿಂಧನೂರು, ಕಾರಟಗಿ ಬಳಗಾನೂರು ,ಕರೂರು ,ಚಾಣಕನೂರು, ಬಳ್ಳಾರಿ, ಹೊಸಪೇಟೆ ಅನೇಕ ಕಡೆಗಳಲ್ಲಿ ಸಾವಿರಾರು ಸಂಖ್ಯೆಯ ಭಕ್ತ ಸಮೂಹವನ್ನು ಹೊಂದಿದ್ದರು. ಪರಮಪೂಜ್ಯರು ಪ್ರತಿ ವರ್ಷ ಪುರಾಣ ಪ್ರವಚನ ಕಾರ್ಯಕ್ರಮ, ಮಠಕ್ಕೆ ಬರುವಂತ ಭಕ್ತಾದಿಗಳ ತಮ್ಮ ಕಷ್ಟ ಕಾರ್ಪಣ್ಯಗಳನ್ನ ತಮ್ಮ ವಾಕ್ಸಿದ್ದಿ ಮೂಲಕ ಪರಿಹರಿಸುತ್ತಾ ಅವರ ಕಷ್ಟವನ್ನು ತಮ್ಮ ಕಷ್ಟವೆಂದು ಭಾವಿಸಿ ಅವರ ಕಷ್ಟವನ್ನು ಪರಿಹರಿಸುತ್ತಾ ಇದ್ದರು. ಹೆಚ್ಚು ಮಾತನಾಡದೆ ಸದಾ ಮೌನವಾಗಿರುತ್ತ ತಮ್ಮ ದೈವಿಶಕ್ತಿಯ ಮೂಲಕ ಸುತ್ತಮುತ್ತಲಿನ ಗ್ರಾಮದ ಜನರ ಭಾವನೆಗಳಿಗೆ ಸ್ಪಂದಿಸುತ್ತ ಆಧ್ಯಾತ್ಮಿಕವಾಗಿ ಹೆರಕಲ್ಲುಗ್ರಾಮವನ್ನ ಸುಕ್ಷೇತ್ರವನ್ನಾಗಿ ಪರಿವರ್ತಿಸಿದ್ದರು. ಚಿಕ್ಕ ಮಕ್ಕಳಿಗೆ ಬರುವಂತ ಬಾಲಭಾದೆಗಳನ್ನು ಪರಿಹರಿಸುತ್ತಾ, ಜನರು ಪ್ರತಿಯೊಂದು ಕೆಲಸ ಕಾರ್ಯಗಳನ್ನು ಪ್ರಾರಂಭಿಸುವಂತಹ ಸಂದರ್ಭದಲ್ಲಿ ಪೂಜ್ಯರ ಆಶೀರ್ವಾದವನ್ನು ಪಡೆದುಕೊಂಡು ಪ್ರಾರಂಭಿಸುತ್ತಿದ್ದರು. ಹೊಸ ಮನೆಗಳ ಪ್ರವೇಶದಂತ ಸಂದರ್ಭ ,ಹೊಲಗದ್ದೆಗಳ ಖರೀದಿ ಖರೀದಿಯ ಸಂದರ್ಭದಲ್ಲಿ, ಹೊಸ ವಾಹನ ಖರೀದಿ ಸಂದರ್ಭದಲ್ಲಿ ಪರಮಪೂಜ್ಯರ ವಾಕ್ಯದಂತೆ ಈ ಭಾಗದ ಜನರು ನಡೆದು ಕೊಳ್ಳುತ್ತಿದ್ದರು. ಪರಮಪೂಜ್ಯರ ಆಶೀರ್ವಾದದ ನಂತರ ತಮ್ಮೆಲ್ಲ ಶುಭಕಾರ್ಯಗಳನ್ನು ಪ್ರಾರಂಭಿಸಿ ಮುಂದುವರಿಸುತ್ತಿದ್ದರು. ಈ ದಿನ ಈ ಭಾಗದ ಸಾವಿರಾರು ಭಕ್ತರು ಪರಮಪೂಜ್ಯರನ್ನ ಕಳೆದುಕೊಂಡು ದುಃಖ ತಪ್ತವಾಗಿ ಅವರ ಆಶೀರ್ವಾದವನ್ನು ಸದಾ ಬಯಸುತ್ತಿದ್ದಾರೆ. ಈ ಆಧುನಿಕ ಕಾಲದಲ್ಲಿ ಪವಾಡ ಪುರುಷರಾಗಿ ,ಆಧ್ಯಾತ್ಮಿಕ ಸಾಧಕರಾಗಿ ವಾಕ್ಸಿದ್ದಿ ಪುರುಷರಾಗಿ ಜನಮಾನಸದಲ್ಲಿ ಉಳಿದಿರುವ ಪೂಜ್ಯರು ಶರಣರಂತೆ ,ಅವದೂತರಂತೆ ಬದುಕಿದ ಸಾಧಕರಾಗಿ ,ತ್ರಿಕಾಲ ಪೂಜೆಯನ್ನು ಶ್ರೀಮಠದಲ್ಲಿ ನೆರವೇರಿಸುತ್ತಾ ಸಾಮಾಜಿಕವಾಗಿ ಆಧ್ಯಾತ್ಮಿಕವಾಗಿ ಸದಾ ಭಕ್ತರ ಶ್ರೇಯಸ್ಸನ್ನು ಬಯಸುತ್ತಿದ್ದ ಪೂಜ್ಯರು ಇಂದು ಲಿಂಗೈಕ್ಯರಾಗಿದ್ದಾರೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದರು.