
ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.25: ಬಳ್ಳಾರಿಯ ವೀ ವಿ ಸಂಘದ ಅಂಗ ಸಂಸ್ಥೆಯಾದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ನಲ್ಲಿ ಮೆಕ್ಯಾನಿಕಲ್ ವಿಭಾಗದ ಸಿಬ್ಬಂದಿಗಳಿಗೆ ಹೊಸ ಪಠ್ಯಕ್ರಮ ಅ-20 ಆಧಾರಿತ ತರಬೇತಿ ಕಾರ್ಯಗಾರದ ಉಧ್ಘಾಟನೆ ಮಾಡಲಾಯಿತು. ಫೆ.28 ರ ರವರೆಗೆ ನಡೆಯಲಿದೆ .
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಳ್ಳಾರಿಸರ್ಕಾರಿ ಪಾಲಿಟೆಕ್ನಿಕ್ ನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ರೆಹಾಮಾನ್ ಅಲಿ ಮಾತನಾಡುತ್ತಾ, ತಾಂತ್ರಿಕ ವಿಷಯದಲ್ಲಿ ಪ್ರಾಯೋಗಿಕ ವಿಷಯಕ್ಕೆ ಹೆಚ್ಚುಮಹತ್ವ ಅದರಿಂದ ತಾಂತ್ರಿಕ ವಿಷಯದಲ್ಲಿ ಹೊಸ ಹೊಸ ಅನ್ವೇಷಣೆ ಮತ್ತು ಅದರ ಪ್ರಯೋಗ ನಡೆಯುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಪ್ರಯೋಗಾಲಯದಲ್ಲಿ ಕಲಿಕೆಯ ಮಹತ್ವವನ್ನು ತಿಳಿಸಿ ಅದನ್ನು ಆಳವಡಿಸಿಕೊಳ್ಳಲು ಮಾರ್ಗದರ್ಶನ ನೀಡಬೇಕೆಂದು ಕರೆ ನೀಡಿದರು..
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೆಚ್.ಎಂ.ಕಿರಣ್ಕುಮಾರ್ ಮಾತನಾಡುತ್ತಾ ಹೇಗೆ ದಿನ ದಿನಕ್ಕೆ ಆಧುನಿಕ ತಾಂತ್ರಿಕತೆ ಬದಲಾಗುತ್ತದೆಯೋ ಹಾಗೆ. ಅದಕ್ಕೆ ಸಿಬ್ಬಂದಿಗಳು ತಮ್ಮ ನೈಪುಣ್ಯತೆ, ಉನ್ನತೀಕರಣ ಬಹಳ ಮುಖ್ಯ ಹಾಗೂ ಹೊಸ ಆವಿಷ್ಕಾರಗಳು ಈ ಆಧುನಿಕ ಜೀವನಕ್ಕೆ ಮುಖ್ಯ ಎಂದು ತಿಳಿಸಿದರು. ಹಾಗೂ ಪ್ರಾಂಶುಪಾಲರಾದ ಡಾ.ಟಿ.ಎಂ.ಗಂಗಾಧರಸ್ವಾಮಿ ಮಾತನಾಡುತ್ತಾ, ಜೀವನದಲ್ಲಿ ನಿರಂತರ ಕಲಿಕೆ ಬಹಳ ಮುಖ್ಯ. ಕಲಿಕೆ ಸಮಾಜ ಮತ್ತು ದೇಶದ ಅಭಿವೃದ್ದಿಯ ಸಂಕೇತವಾಗಿದೆ ಎಂದು ತಿಳಿಸಿದರು .ಆಡಳಿತ ಮಂಡಳಿಯ ಸದಸ್ಯರಾದ ಹಲಕುಂದಿ ವಿಜಯಕುಮಾರ್, ಎ.ವೀರನಗೌಡ, ಸಂಗನಕಲ್ ಚಂದ್ರಶೇಖರ್ , ಮೆಕ್ಯಾನಿಕಲ್ ವಿಭಾಗಾಧಿಕಾರಿ ಎಮ್.ಪಿ. ಮಹೇಶ್ ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು , ಸಿಬ್ಬಂದಿಗಳು ಹಾಜರಿದ್ದರು.
ಈ ಕಾರ್ಯಕ್ರಮವನ್ನು ಉದ್ಯೋಗಾಧಿಕಾರಿ ಕುಲ್ಲಯ್ಯ ಸ್ವಾಮಿ ನಡೆಸಿಕೊಟ್ಟರು.