ಹೆಚ್ಚು ಸಿನಿಮಾ ಮಾಡುವ ಚಾಲೆಂಜ್ -ನಿಖಿಲ್ ಕುಮಾರ್

“ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಬೇಲೇ ಬೇಕು ಎಂದು ನನಗೆ ನಾನೇ ಚಾಲೆಂಜ್ ತೆಗೆಕೊಂಡಿದ್ದೇನೆ. ಇನ್ನು ಮುಂದೆ ಸಿನಿಮಾ ಕಡೆಗೆ ಹೆಚ್ಚಿನ ಕಡೆ ಆದ್ಯತೆ ನೀಡುತ್ತೇನೆ..”

ಹೀಗಂತ ಧೃಡವಾದ ಮಾತುಗಳಲ್ಲಿ ಖಚಿತಪಡಿಸಿದರು ಸ್ಯಾಂಡಲ್‍ವುಡ್ ಯುವರಾಜ ನಿಖಿಲ್ ಕುಮಾರ್. ದಕ್ಷಿಣ ಭಾರತ ಚಿತ್ರರಂಗ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ, ನಿಖಿಲ್ ಕುಮಾರಸ್ವಾಮಿ ಅವರಿಗೆ ಚಿತ್ರ ನಿರ್ಮಾಣ ಮಾಡುತ್ತಿದ್ದು ಅದರ ಮುಹೂರ್ತ ಸಮಾರಂಭದಲ್ಲಿ ಈ ವಿಷಯ ತಿಳಿಸಿದರು.

ಇದುವರೆಗೆ ಮಾಡಿರುವ ಜಾಗ್ವಾರ್, ಸೀತಾರಾಮ ಕಲ್ಯಾಣ, ಕುರುಕ್ಷೇತ್ರ, ರೈಡರ್ ಚಿತ್ರದ ಮೂಲಕ ರಾಜ್ಯದ ಜನ ಮನೆ ಮಕ್ಕಳ ರೀತಿ ಬೆಳೆಸಿದ್ದಾರೆ. ಪ್ರತಿ ಸಿನಮಾವನ್ನು ಪ್ರೀತಿಯಿಂದ ಮಾಡಿದ್ದೇನೆ, ಈ ಚಿತ್ರದಲ್ಲಿಯೂ ಕೂಡ ಶಕ್ತಿ ಮೀರಿ ಪ್ರಾಮಾಣಿಕವಾಗಿ ಮಾಡ್ತೇನೆ. ಮನರಂಜನೆ ನೀಡುವುದಷ್ಟೇ ನನ್ನ ಉದ್ದೇಶ.

ನಿರ್ದೇಶಕ ಲಕ್ಷಣನ್ ಅವರು ಕಳೆದ ಒಂದು ವರ್ಷದಿಂದ ಬೆಂಗಳೂರಿನಲ್ಲಿ ಕಥೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.  ರಾಜಕೀಯದ ಹಿನ್ನೆಲೆಯಲ್ಲಿ ಬಂದರೂ ಜನ ಪ್ರೀತಿಕೊಟ್ಟು ಬೆಳೆಸಿದ್ದಾರೆ. ಕಲಾವಿದನಾಗಿ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದರು

ನಿರ್ಮಾಪಕ ಸುಭಾಷ್ ಕರಣ್ ನಿರ್ಮಾಣದಲ್ಲಿ ಚಿತ್ರ ಮೂಡಿಬರುತ್ತಿದೆ. ಒಬ್ಬರ ಜೊತೆ ಸಂಬಂಧ ಬೆಳೆಸಿದರೆ ಅದನ್ನು ಬಿಟ್ಟುಕೊಡುವುದಿಲ್ಲ,ಅದೇ ರೀತಿ ಸುಭಾಷ್ ಅವರ ಜೊತೆಯೂ ಕೂಡ ಎಂದು ಮಾತಿಗೆ ವಿರಾಮ ಹಾಕಿದರು. ನಾಯಕಿಯಾಗಿ ಯುಕ್ತಿ ತನೇಜಾ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಲಕ್ಷಣನ್ ಮಾತನಾಡಿ ಮುಂದಿನ ತಿಂಗಳು 11 ರಿಂದ ಚಿತ್ರೀಕರಣ ಆರಂಭವಾಗಲಿದೆ. ಪಕ್ಕಾ ಮನರಂಜನೆಗೆ ಆದ್ಯತೆ ನೀಡಲಾಗಿದೆ. ಚಿತ್ರೀಕರಣಕ್ಕೆ ಹೋಗುವ ಮುನ್ನ ಶೀರ್ಷಿಕೆ ಬಿಡುಗಡೆ ಮಾಡಲಾಗುವುದು. ಐದು ಭಾಷೆಯಲ್ಲಿ ಚಿತ್ರ ಮೂಡಿ ಬರಲಿದೆ.ಜೊತೆಗೆ ಕಲಾವಿದರ ದಂಡು ಇದೆ ಎಂದರು.

ನಟ ಕೋಮಲ್ ಕುಮಾರ್ ಮಾತನಾಡಿ, ಕಥೆ ಕೇಳಿ ಥ್ರಿಲ್ ಆಗಿದ್ದೇನೆ.ಹೇಳಿದಂತೆ ಮಾಡಿದರೆ ಚಿತ್ರ ಬೇರೆಯೇ ಮಟ್ಟಕ್ಕೆ ಹೋಗಲಿದೆ. ಒಳ್ಳೆಯ ಪಾತ್ರ ಎಂದು ಹೇಳಿಕೊಂಡರು. ನಿರ್ಮಾಪಕ ಸುಭಾಷ್ ಕರಣ್ ಮಾತನಾಡಿ, ಬಹುಭಾಷೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು.

ಎಚ್‍ಡಿಕೆ ಕ್ಲಾಪ್

ನಿಖಿಲ್ ಕುಮಾರ್ ಅವರ ನೂತನ ಚಿತ್ರದ ಮುಹೂರ್ತದಲ್ಲಿ ಮಾಜಿ  ಪ್ರಧಾನಿ ಹೆಚ್.ಡಿ ದೇವೇಗೌಡ ಹಾಜರಿದ್ದು ಹರಿಸಿದರು, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ನಿರ್ಮಾಪಕ ಸುಭಾಷ್ ಕರಣ್ ಕ್ಲಾಪ್ ಮಾಡಿದರು. ನಿರ್ಮಾಪಕ ಸುಭಾಷ್ ಕರಣ್ ಕುಟುಂಬ ಈ ಕ್ಷಣಕ್ಕೆ ಸಾಕ್ಷಿಯಾಗಿತ್ತು.