
ಧಾರವಾಡ,ಆ25: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿಕನ್ನಡ ನಾಡಿನ ವೀರವನಿತೆಯರಕೆಚ್ಚೆದೆಯ ಹೋರಾಟಅಸಾಧಾರಣವಾದುದುಎಂದುಕರ್ನಾಟಕ ವಿದ್ಯಾವರ್ಧಕ ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು, ನಗರದ ಕೆ.ಇ.ಬೋರ್ಡಿನ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ 77 ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಆ ದಿನಗಳು' ಸ್ಮರಣೆಯಕಾರ್ಯಕ್ರಮ ಉದ್ಘಾಟಿಸಿ ನುಡಿದರು. ಅತಿಥಿಉಪನ್ಯಾಸಕರಾಗಿ ಆಗಮಿಸಿದ್ದ ಕರಡಿಗುಡ್ಡ ಸರಕಾರಿ ಪ.ಪೂ. ಮಹಾವಿದ್ಯಾಲಯದಉಪನ್ಯಾಸಕ ಪ್ರಕಾಶ ಸುಣಗಾರ್
ಕರ್ನಾಟಕದಲ್ಲಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು’ ವಿಷಯಕುರಿತುಉಪನ್ಯಾಸ ನೀಡುತ್ತಾ, ಕರಾವಳಿ ಉಳ್ಳಾಲದ ರಾಣಿಅಬ್ಬಕ್ಕದೇವಿ 1556 ರಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ ಮೊದಲ ಭಾರತೀಯರಾಣಿ. ಅವಳ ಶೌರ್ಯ, ಸಾಹಸದ ಹೋರಾಟ ಸ್ಮರಣೀಯ.ಬೆಳವಡಿ ಮಲ್ಲಮ್ಮ, ಕಿತ್ತೂರುಚನ್ನಮ್ಮ, ಒನಕೆ ಓಬವ್ವ, ಕೆಳದಿ ಚನ್ನಮ್ಮ ಮುಂತಾದ ವೀರವನಿತೆಯರು ನಾಡ ಸ್ವಾತಂತ್ರ್ಯಕ್ಕಾಗಿ ಹೋರಾಡಿದಕನ್ನಡದ ವೀರ ಮಹಿಳೆಯರು.
ಗಾಂಧಿಯುಗದಲ್ಲಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರಾದ ಸಿದ್ಧಮ್ಮ ಬಳ್ಳಾರಿ, ಉಮಾಬಾಯಿಕುಂದಾಪೂರ ಹುಬ್ಬಳ್ಳಿಯ ನಾಗಮ್ಮ ಪಾಟೀಲ, ಶಕುಂತಲಾಕುರ್ತಕೋಟಿ, ಯಶೋಧರಾದಾಸಪ್ಪ ಮುಂತಾದವರುಗಾಂಧೀಜಿಯವರ ಮಾರ್ಗದರ್ಶನದಲ್ಲಿಕ್ವಿಟ್ಇಂಡಿಯಾ ಹಾಗೂ ಅಸಹಕಾರ ಚಳುವಳಿಯಲ್ಲಿ ಸಂಘಟಿತರಾಗಿ ಹೋರಾಡಿ ಆಳರಸರ ವಿರುದ್ಧ ಸ್ವಾಭಿಮಾನದ ಹೋರಾಟ ನಡೆಸಿದರು.ಈ ಹೋರಾಟಗಾರ್ತಿಯರಜೀವನದಯಶೋಗಾಥೆ ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಿದೆಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ಇ. ಬೋರ್ಡ್ ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ ಮಾತನಾಡಿ, ಕ.ವಿ.ವ. ಸಂಘದ ಶಿಕ್ಷಣ ಮಂಟಪವು ಇಂದಿನ ವಿದ್ಯಾರ್ಥಿಗಳಿಗೆ ದೇಶಾಭಿಮಾನ, ನಿಸ್ವಾರ್ಥ ಹೋರಾಟದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯಎಂದರು.
ಕೆ.ಇ. ಬೋರ್ಡ್ ಸಂಸ್ಥೆಯಖಜಾಂಚಿಎಸ್.ಎನ್. ಪರಾಂಡೆ ಮಾತನಾಡಿದರು.ಶಿಕ್ಷಣ ಮಂಪಟದ ಸಂಚಾಲಕ ವೀರಣ್ಣಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಪತ್ರಕರ್ತ ವಸಂತ ಮುರ್ಡೇಶ್ವರ, ಎನ್.ಎಸ್. ಗೋವಿಂದರಡ್ಡೆ, ಪ್ರಾಚಾರ್ಯ ಸುನೀತಾಕಡಪಟ್ಟಿಇದ್ದರು.
ಕುಮಾರಿ ಗಂಗಾ ಮಂಗಳಗಟ್ಟಿ ಪ್ರಾರ್ಥಿಸಿದರು.ಎಸ್.ಜಿ. ಕಡಪಟ್ಟಿ ಸ್ವಾಗತಿಸಿದರು.ಎಸ್.ಎಲ್. ಶೇಖರಗೋಳ ನಿರೂಪಿಸಿದರು.ಗೋವಿಂದಕುಲಕರ್ಣಿ ವಂದಿಸಿದರು.ಪ್ರೊ. ಹರ್ಷ ಡಂಬಳ, ಕೆ.ಜಿ. ದೇವರಮನಿ, ಮಹಾಂತೇಶ ನರೇಗಲ್, ಬಿ.ಬಿ. ಪಾಟೀಲ, ಎಸ್.ಡಿ. ಮರೇದ, ಎಸ್.ಎಚ್.ಚವ್ಹಾಣ, ಸಂತೋಷ ವಕ್ಕುಂದ ಸೇರಿಂತೆ ಸಿಬ್ಬಂದಿಗಳು ಇದ್ದರು.