
ಕಲಬುರಗಿ.ಮಾ.23: ನಾಡಿನ ಜೈನ ಧರ್ಮಿಯರ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶ್ರವಣಬೆಳಗೊಳದ ಜೈನ ಮಠದ ಪೀಠಾಧಿಪತಿ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಭಟ್ಟಾರಕ ಶಿರೋಮಣಿ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿಯವರು ಇಂದು ನಮ್ಮನ್ನೆಲ್ಲ ಬಿಟ್ಟು ಅಗಲಿರುವುದು ಜೈನ ಸಮಾಜದವರೂ ಸೇರಿದಂತೆ ನಾಡಿನ ಜನತೆ ಅತೀವ ದುಃಖ ವ್ಯಕ್ತಪಡಿಸಿದರು.
ಜಿಲ್ಲಾ ಜೈನ ಸಮಾಜ ವತಿಯಿಂದ ಮಹಾನಗರದ ಮಹಾವೀರ ವೃತ್ತದಲ್ಲಿ ಆಯೋಜಿಸಿದ ನುಡಿ ನಮನ ಸಮಾರಂಭದಲ್ಲಿ ಮಾತನಾಡಿದ ಗಣ್ಯರು, ಸ್ವಾಮೀಜಿಯವರ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಗಳನ್ನು ಸ್ಮರಣೆ ಮಾಡಿಕೊಂಡರು. ಸ್ವಾಮಿತ್ವದ ಬದುಕು ಸಮಾಜಕ್ಕಾಗಿ ಮೀಸಲಿಟ್ಟಿದ್ದ ಸದಾ ಸಮಾಜದ ಕುರಿತು ಆಲೋಚಿಸುತ್ತಿದ್ದ ಪರಮಪೂಜ್ಯರು ಕಾವಿ ಕುಲದ ಶ್ರೇಷ್ಠ ಯತಿರಣ್ಯರೆಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ರಾಜ್ಯ ನಿರ್ದೇಶಕ ಸುರೇಶ್ ತಂಗಾ ಅವರು ಹೇಳಿದರು.
ಶ್ರವಣಬೆಳಗೊಳವನ್ನು ರಾಷ್ಟ್ರ ಮಟ್ಟಕ್ಕೆ, ಅಂತರಾಷ್ಟ್ರ ಮಟ್ಟಕ್ಕೆ ಜೈನ ಧರ್ಮದ ತತ್ವ ಸಿದ್ಧಾಂತಗಳನ್ನು ಮನುಕುಲದ ಮನೆ ಮನಗಳಿಗೆ ತಲುಪಿಸಿದ ಕೀರ್ತಿ ಪೂಜ್ಯ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳಿಗೆ ಸಲ್ಲುತ್ತದೆ ಎಂದು ಅವರು ಸ್ಮರಣೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜೈನ ಸಮಾಜದ ಮುಖಂಡರಾದ ನಾಗನಾಥ್ ಚಿಂದೆ, ಸುಭಾಷ್ ಪಾಟೀಲ್, ಧನ್ಯಕುಮಾರ್ ಕುಣಚಗಿ, ರಮೇಶ್ ಗಡಗಡೆ, ಪ್ರಕಾಶ್ ಜೈನ್, ದೀಪಕ್ ಪಂಡಿತ್, ವಿಜಯಕುಮಾರ್ ಪಾಂಡ್ರೆ, ಶ್ರೇಣಿಕ್ ಡೊಳ್ಳೆ, ಪಾಶ್ರ್ವನಾಥ್ ಚಿಂದೆ, ವಜ್ರಕುಮಾರ್ ಪಾಟೀಲ್, ಭರಮ್ ಜಗಶೆಟ್ಟಿ, ವಿನೋದಕುಮಾರ್ ಪಾಟೀಲ್, ಬಿ.ಕೆ. ಪಾಟೀಲ್, ಜೀತು ಚಿಂದೆ, ಮಹಾವೀರ್ ಬಪ್ಪಣಕರ್, ವಿನೋದಕುಮಾರ್ ಬಬಲಾದಕರ್, ವೈಭವ್ ವನಕುದರೆ, ಬಂಡುಕುಮಾರ್ ವನಕುದರೆ, ರಾಜೇಂದ್ರ ಕುಣಚಗಿ, ನಾಗಲಿಂಗಯ್ಯ ಮಠಪತಿ, ಶ್ರೇಣಿಕ್ ಪಾಟೀಲ್, ಕಿರಣ್ ಪಂಡಿತ್, ರಾಹುಲ್ ಕುಂಬಾರೆ, ಮಹಿಳಾ ಮುಖಂಡರಾದ ಶೀತಲ ಕುಲಕರ್ಣಿ, ಶಿಲ್ಪಾ ಕುಲಕರ್ಣಿ, ಭಾರತಿ ಚಿಂದೆ, ಶ್ರೀಮತಿ ಓರಾ, ಪದ್ಮಶ್ರೀ ಚಿಂದೆ, ದೀಪಾ ಪಾಟೀಲ್, ಭಾರತೀ ವಿಭೂತೆ, ಸೇರಿದಂತೆ ಸಮಾಜ ಬಾಂಧವರು, ಸದ್ಭಾಕ್ತಾದಿಗಳು ಉಪಸ್ಥಿತರಿದ್ದರು.