ಸ್ವಚ್ಚ, ಸುಂದರ ಬೀದರ ನಿರ್ಮಾಣಕ್ಕೆ ಒತ್ತು ನೀಡಿದ ಸಚಿವ ಈಶ್ವರ.ಬಿ ಖಂಡ್ರೆ

ಬೀದರ: ಗ್ರಾಮೀಣ ಭಾಗದ ಜನರು ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ನಗರಗಳತ್ತ ಮುಖ ಮಾಡುತ್ತಿರುವುದರಿಂದ ನಗರಗಳು ಬೆಳೆದು ಮೂಲಭೂತ ಸೌಕರ್ಯದ ಕೊರತೆ ಮತ್ತು ಪರಿಸರ ಮಾಲಿನ್ಯದ ಸಮಸ್ಯೆ ಉಂಟಾಗುತ್ತಿದೆ. ಆದರಿಂದ ನಗರ ಸಭೆಯ ಅಧ್ಯಕ್ಷರು ಮತ್ತು ಸದಸ್ಯರು ಪರಿಸರ ರಕ್ಷಣೆಯ ಜೊತೆಗೆ ಮೂಲಭೂತ ಸೌಕರ್ಯ ಒದಗಿಸುವ ಮೂಲಕ ಸ್ವಚ್ಚ, ಸುಂದರ ಬೀದರ ನಿರ್ಮಾಣಕ್ಕೆ ಒತ್ತು ನೀಡಿ ಎಂದು ಅರಣ್ಯ,ಪರಿಸರ ಮತ್ತು ಜೈವಿಕ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ.ಬಿ ಖಂಡ್ರೆ ಹೇಳಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವಿಧಾನ ಪರಿಷತ ಸದಸ್ಯ ಅರವಿಂದಕುಮಾರ ಅರಳಿಯವರ 50 ಲಕ್ಷ ಅನುಧಾನದಲ್ಲಿ ಪಾದಚಾರಿ ಮಾರ್ಗ ಹಾಗೂ ಬೀದಿ ದೀಪ ಹಾಕಲಾಗಿದೆ ಇದರ ಲಾಭವನ್ನು ಇಲ್ಲಿನ ಸ್ಥಳೀಯರು ಪಡೆಯಬೇಕು. ಮುಂದಿನ ದಿನಗಳಲ್ಲಿ ಇಲ್ಲಿನ ಬಡಾವಣೆಯ ಅಭಿವೃದ್ದಿಗೆ ಸಹಕಾರ ನಿಡಲಾಗುವುದು ಎಂದು ಹೇಳಿದರು.
ಹಿಂದೆ ನಾನು ಪೌರಾಡಳಿ ಖಾತೆ ಸಚಿವನಾಗಿದ್ದ ಸಂದರ್ಭದಲ್ಲಿ ಬೀದರ ಜಿಲ್ಲೆಯ ನಗರಗಳ ಅಭಿವೃದ್ದಿಗೆ ನೂರಾರು ಕೋಟಿ ರೂ.ಗಳ ಅನುಧಾನ ನೀಡಿದ್ದೆನೆ ಆ ಅನುಧಾನದಲ್ಲಿ ಕಾಮಗಾರಿಗಳು ಇಂದಿಗೂ ನಡೆಯುತ್ತಿವೆ. ಈಗ ಮತ್ತೆ ನಾನು ರಹೀಮ್ ಖಾನ್ ಸೇರಿ ಯೋಜನೆ ಹಾಕಿಕೊಂಡಿದೆವೆ ಈ ಯೋಜನೆಯಡಿ ಬೀದರಗೆ 10 ಕೋಟಿ ರೂ. ಭಾಲ್ಕಿಗೆ 10 ಕೋಟಿ ರೂ. ಅನುಧಾನ ಮಂಜೂರು ಮಾಡಲಾಗಿದೆ ಎಂದ ಅವರು ಅಮೃತ ಯೋಜನೆಯಡಿ ಉಳಿತಾಯವಾದ 60 ಕೋಟಿ ರೂ.ಗಳ ಅನುಧಾನ ಪ್ರಸ್ತಾವನೆ ಬಂದ ಹಿನ್ನೆಲೆಯಲ್ಲಿ ಬೀದರಗೆ ಮಂಜುರು ಮಾಡಿದ್ದೇನೆ ಎಂದು ರಹೀಮ್ ಖಾನ್ ಹೇಳಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ಈ ಬಡಾವಣೆಯ ನಗರಸಭೆ ಸದಸ್ಯ ಹಾಗೂ ನಿವಾಸಿಗಳ ಮನವಿಯ ಮೆರೆಗೆ ಕೆಕೆಆರ್.ಡಿ.ಬಿಯಲ್ಲಿ ನನಗೆ ಬರುವ 50 ಲಕ್ಷ ಅನುಧಾನದಲ್ಲಿ ಈ ರಸ್ತೆ ಪಾದಚಾರಿ ಮಾರ್ಗ ಹಾಗೂ ಬೀದಿ ದೀಪ ಅಳವಡಿಸಿದ್ದೆನೆ. ಮುಂದಿನ ದಿನಗಳಲ್ಲಿ ಈ ಬಡಾವಣೆಯ ಇನ್ನು ಹೆಚ್ಚಿನ ಅಭಿವೃದ್ದಿಗೆ ಅನುಧಾನ ಬೇಕಿದ್ದು ಸಚಿವರು ಸಹಕಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೀದರ ನಗರಸಭೆ ಅಧ್ಯಕ್ಷ ಮೊಹಮ್ಮದ ಗೌಸ, ನಾಗಸಭೆ ಸದಸ್ಯ ಪ್ರಶಾಂತ ದೊಡ್ಡಿ, ಬಸವರಾಜ ಜಾಬಶೇಟ್ಟಿ, ಸೇರಿದಂತೆ ಬಡಾವಣೆಯ ಮುಖಂಡರು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.