ಸೈಬರ್ ಭದ್ರತೆ ತಂತ್ರಜ್ಞಾನಗಳು ಹೆಚ್ಚು ಉದಯೋನ್ಮುಖ ವಲಯಗಳು: ಪ್ರೊ. ಲಕ್ಷ್ಮೀನಾರಾಯಣ್

ಕಲಬುರಗಿ,ಜು.19: ಯಂತ್ರ ಕಲಿಕೆ, ಐಒಟಿ ಮತ್ತು ಸೈಬರ್ ಭದ್ರತೆ ತಂತ್ರಜ್ಞಾನಗಳು ಪ್ರಸ್ತುತ ಹೆಚ್ಚು ಉದಯೋನ್ಮುಖ ವಲಯಗಳಾಗಿವೆ. ಅವು ನಾವು ಬದುಕುವ ಮತ್ತು ಕೆಲಸ ಮಾಡುವ ವಿಧಾನವನ್ನು ಮರು ವ್ಯಾಖ್ಯಾನಿಸುತ್ತಿವೆ ಎಂದು ಉಸ್ಮಾನಿಯಾ ವಿಶ್ವವಿದ್ಯಾಲಯದ ಪೆÇ್ರ. ಪಿ ಲಕ್ಷ್ಮಿನಾರಾಯಣ್ ಅವರು ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ವಿಭಾಗವು ಆಯೋಜಿಸಿದ್ದ ಯಂತ್ರ ಕಲಿಕೆ ಮತ್ತು ಐಒಟಿ ಭದ್ರತೆ ಕುರಿತ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಯಂತ್ರ ಕಲಿಕೆ, ಐಒಟಿ ಮತ್ತು ಸೈಬರ್ ಭದ್ರತೆ ಕುರಿತು ಎಲ್ಲರೂ ಮಾತನಾಡುತಿದ್ದಾರೆ. ಅಜ್ಜಂದಿರಿಂದ ಹಿಡಿದು ಮೊಮ್ಮಕ್ಕಳವರೆಗೆ ಎಲ್ಲ ತಲೆಮಾರುಗಳು ಪ್ರಭಾವಿತರಾಗಿದ್ದಾರೆ ಮತ್ತು ಅವುಗಳಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ ಎಂದರು.
ಮನೆ ಮತ್ತು ಕಚೇರಿಗಳಲ್ಲಿ ಮಾತ್ರವಲ್ಲದೆ ಸಾರ್ವಜನಿಕ ಸ್ಥಳಗಳಾದ ರೈಲು ನಿಲ್ದಾಣ, ವಿಮಾನ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿಯೂ ಜನರಿಗೆ ಸಾಮೂಹಿಕ ಸೇವೆ ನೀಡುವಲ್ಲಿ ಯಂತ್ರ ಕಲಿಕೆ ಮತ್ತು ಐಒಟಿ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ತಂತ್ರಜ್ಞಾನ ಮತ್ತು ಸಾಫ್ಟ್‍ವೇರ್ ಕೆಲಸ ಮಾಡಲು ನಮಗೆ ನೆಟ್‍ವಕಿರ್ಂಗ್ ಮತ್ತು ಇಂಟರ್ನೆಟ್‍ನಂತಹ ಮೂಲಭೂತ ಮೂಲಸೌಕರ್ಯಗಳು ಬೇಕಾಗುತ್ತವೆ. ಆದ್ದರಿಂದ ಯಂತ್ರ ಕಲಿಕೆ ಮತ್ತು ಐಒಟಿ ಒಟ್ಟಿಗೆ ಕೆಲಸ ಮಾಡುತ್ತವೆ ಎಂದು ಅವರು ತಿಳಿಸಿದರು.
ಮೌಲ್ಯಯುತವಾದ ಡೇಟಾವನ್ನು ರಕ್ಷಿಸಲು ಮತ್ತು ಈ ತಂತ್ರಜ್ಞಾನಗಳ ಸುರಕ್ಷತೆ ಬಹಳ ಮುಖ್ಯವಾಗಿದೆ. ಆದ್ದರಿಂದ ಸಮ್ಮೇಳನದ ವಿಷಯವು ಬಹಳ ಪ್ರಸ್ತುತವಾಗಿದೆ ಮತ್ತು ಸೂಕ್ತವಾಗಿದೆ ಎಂದು ಅವರು ಹೇಳಿದರು.
ಕುಲಪತಿ, ಪೆÇ್ರ. ಬಟ್ಟು ಸತ್ಯನಾರಾಯಣ್ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಭಾರತವು ಬಹಳಷ್ಟು ಬದಲಾಗಿದೆ, 1960 ಮತ್ತು 1970ರ ದಶಕದಲ್ಲಿ ನಾವು ಅಲೋಗೊರಿ ಥಮ್ ಟೇಬಲ್‍ಗಳನ್ನು ಮತ್ತು ನಂತರ ಸರಳ ಕ್ಯಾಲ್ಕುಲೇಟರ್‍ಗಳನ್ನು ಬಳಸುತ್ತಿದ್ದೆವು. ಆದರೆ ಇಂದು ಜಗತ್ತು ತುಂಬಾ ಬದಲಾಗಿದೆ ಮತ್ತು ಭಾರತವು ತಂತ್ರಜ್ಞಾನದಲ್ಲಿ ಮುಂಚೂಣಿಯಿಂದ ಜಗತ್ತನ್ನು ಮುನ್ನಡೆಸುತ್ತಿದೆ. 1990ರ ದಶಕದಲ್ಲಿ ತಂತ್ರಜ್ಞಾನವು ಜನರನ್ನು ಬದಲಾಯಿಸುತ್ತದೆ ಮತ್ತು ಉದ್ಯೋಗಗಳನ್ನು ನಾಶಪಡಿಸುತ್ತದೆ ಎಂದು ಜನರು ಭಾವಿಸಿದ್ದರು. ಆದರೆ ತಂತ್ರಜ್ಞಾನವು ಜನರ ಬದಲಿಗೆ ಲೆಡ್ಜರ್‍ಗಳನ್ನು ಬದಲಿಸಿದೆ ಮತ್ತು ಹೊಸ ವಲಯಗಳನ್ನು ಮತ್ತು ದೊಡ್ಡ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದರು. ಜಾಗತಿಕ ತಂತ್ರಜ್ಞಾನ ಸಂಸ್ಥೆಗಳನ್ನು ಭಾರತೀಯರು ಮುನ್ನಡೆಸುತ್ತಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮಾಡುವ ಅಗತ್ಯವಿದೆ. ನಮ್ಮ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್ ಪ್ಲೇಸ್‍ಮೆಂಟ್‍ಗಳ ಮೂಲಕ ಸ್ಥಾನ ಪಡೆದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅಮೆರಿಕದ ಸೌತ್ ಡಕೋಟಾ ವಿಶ್ವವಿದ್ಯಾಲಯದ ಪೆÇ್ರ. ಕೆ.ಸಿ. ಸಂತೋμï, ಜವಹರಲಾಲ್ ನೆಹರು ವಿಶ್ವವಿದ್ಯಾಲಯ ನವದೆಹಲಿಯ ಪ್ರೊ. ಮಂಜುಖಾರಿ, ಸಮ್ಮೇಳನದ ಸಂಚಾಲಕ ಪೆÇ್ರ. ಆರ್.ಎಸ್. ಹೆಗಡಿ ಅವರು ಮಾತನಾಡಿದರು. ಗಣಕ ವಿಜ್ಞಾನ ನಿಕಾಯದ ಡೀನ್ ಪೆÇ್ರ. ಶ್ರೀಕಂಠಯ್ಯ ಅವರು ಸ್ವಾಗತಿಸಿದರು. ಡಾ. ಮಾಧುರಿ ಕಾಗಲೆ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ. ಪರಶುರಾಮ್ ಕಾಂಬಳೆ ಅವರು ವಂದಿಸಿದರು. ಸಂಘಟನಾ ಸಮಿತಿ ಸದಸ್ಯ ಡಾ. ಗುರುರಾಜ್ ಮುಕರಂಬಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನ್‍ರು, ಪ್ರಾದ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.