ಸೆ 8. ರಂದು ಡಾ. ಅಪ್ಪಾರಾವದೇವಿ ಮುತ್ಯಾ ಮಹಾರಾಜರಿಗೆ ಸುವರ್ಣ ಕಿರೀಟ ಧಾರಣೆ ಹಾಗೂ ಗುರುವಂದನ

ಕಲಬುರಗಿ:ಸೆ.4: ತಾಲೂಕಿನ ಶ್ರೀನಿವಾಸ್ ಸರಡಗಿ ಶ್ರೀ ಮಹಾಲಕ್ಷ್ಮಿ ಶಕ್ತಿ ಪೀಠದಲ್ಲಿ ಶ್ರಾವಣ ಮಾಸದ ನಾಲ್ಕನೇ ಶುಕ್ರವಾರ ಸೇ 8 ರಂದು ಬೆಳಿಗ್ಗೆ 9 ಕ್ಕೆ ಪಲ್ಲಕ್ಕಿ ಉತ್ಸವ ಶ್ರೀದೇವಿಗೆ ಮಹಾಭಿಷೇಕ ಮಹಾಲಂಕಾರ ಮಹಾನವಿದ್ಯ ಮತ್ತು ಅರ್ಚನೆ ಹಾಗೂ ಹೋಮ ಸದ್ಧರ್ಮ ಶಿರೋಮಣಿ ಹಾಗೂ ಶ್ರೀ ಪರಮಪೂಜ್ಯ ಡಾ. ಅಪ್ಪಾರಾವದೇವಿ ಮುತ್ಯಾ ಮಹಾರಾಜರು ಇವರಿಗೆ ಸುವರ್ಣ ಕಿರೀಟ ಧಾರಣೆ, ಗುರುವಂದನ ಕಾರ್ಯಕ್ರಮ ನಂತರ ಸಂಗೀತ ಕಾರ್ಯಕ್ರಮ ಹಾಗೂ ಮಹಾಪ್ರಸಾದ ವಿತರಿಸಲಾಗುವುದು ಆದಕಾರಣ ಎಲ್ಲಾಭಕ್ತಾಧಿಗಳು ಆಗಮಿಸಬೇಕೆಂದು ಶಕ್ತಿ ಪೀಠದ ಕಾರ್ಯದರ್ಶಿ ವಿಶ್ವನಾಥ ಪಾಟೀಲ್ ಬೆನೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.