(ಸಂಜೆವಾಣಿ ವಾರ್ತೆ)
ವಿಜಯಪುರ:ಜು.12: ಆರೋಗ್ಯ ದೃಷ್ಠಿಯಿಂದ ಮೀನು ಅಧಿಕ ಜನಪ್ರೀಯಗೊಳ್ಳುತ್ತಿರುವ ಆಹಾರ ದೇಶದ ಹೆಚ್ಚುತ್ತಿರುವ ಜನಸಂಖ್ಯೆಗೆ ಪೌಷ್ಠಿಕಾಂಶಭರಿತ ಹಾಗೂ ಕಡಿಮೆ ವೆಚ್ಚದ ಸಮತೋಲ ಆಹಾರವನ್ನು ದೊರೆಯುವಂತಹ ಮಾಡುವುದು ಸದ್ಯದ ಪರಿಸ್ಥತಿಯಲ್ಲಿ ದೊಡ್ಡ ಸವಾಲಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ, ವಿಜ್ಞಾನ ವಿಭಾಗದ ಸಂಯೋಜಕರಾದ ಡಾ.ರೇಣುಕಾ ಮೇಟಿ ಹೇಳಿದರು.
ಮಂಗಳವಾರ ನಗರದ ಹೊರ ವಲಯದಲ್ಲಿರುವ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರ, ಭೂತನಾಳದಲ್ಲಿ “ಸಿಹಿನೀರು ಅಲಂಕಾರಿಕ ಮೀನು ಸಾಕಾಣಿಕೆ” ವಿಷಯದ ಮೇಲೆ ಆಯೋಜಿಸಿದ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೀದರನ ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕರ ಡಾ.ಎನ್.ಎ.ಪಾಟೀಲ್, ಅವರು ಮಾತನಾಡಿ, ಮಹಿಳೆಯರು ಕಡಿಮೆ ಸ್ಥಳದಲ್ಲಿ, ಕಡಿಮೆ ಖರ್ಚಿನಲ್ಲಿ ಅಲಂಕಾರಿಕ ಮೀನು ಸಾಕಾಣಿಕೆ ಮಾಡುವುದರಿಂದ ಸ್ಥಳಿಯವಾಗಿ ಲಾಭವನ್ನುಗಳಿಸಬಹುದು. ಈ ಕ್ಷೇತ್ರದಲ್ಲಿ ಉದ್ಯೊಮಿದಾರರಾಗಲು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿಯಲ್ಲಿ ಸಹಾಯಧನ ಲಭ್ಯವಿರುವುದರಿಂದ ಮಹಿಳೆಯರು ಸ್ವಂತ ಉದ್ಯೋಗ ಪ್ರಾರಂಭಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭೂತನಾಳ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ವಿಜಯಕುಮಾರ ಎಸ್. ಅವರು ಮಾತನಾಡಿ, ಪ್ರಪಂಚದಲ್ಲಿ ಸುಮಾರು 179 ಜಾತಿಯ ಸಿಹಿನೀರು ಬಣ್ಣದ ಮೀನುಗಳಿದ್ದು ಕೆಲವು ಅತ್ಯಂತ ಜನಪ್ರೀಯಗೊಂಡಿದೆ. ಅವುಗಳಲ್ಲಿ ಗೋಲ್ಡ್ ಫೀಶ್, ಮೋಲಿ, ಬಾರ್ಬ, ಗೌರಾಮಿ, ಗಪ್ಪಿ, ಟೆಟ್ರ್ ಇತ್ಯದಿ. ಪ್ರಪಂಚದಲ್ಲಿ ಜರ್ಮನಿ 100 ದಶಲಕ್ಷ ಡಾಲರ್ ಬೆಲೆಬಾಳುವ ಅಲಂಕಾರಿಕ ಮೀನುಗಳನ್ನು ರಫ್ತುಮಾಡಲಾಗುತ್ತಿದೆ. ಸಿಂಗಾಪುರವು ಪ್ರಪಂಚದಲ್ಲಿಯೇ ಅತೀ ದೊಡ್ಡ ಅಲಂಕಾರಿಕ ಮೀನುಗಳ ವಹಿವಾಟಿನ ಕೇಂದ್ರವಾಗಿದ್ದು ವರ್ಷ ಒಂದಕ್ಕೆ 40-50 ದಶಲಕ್ಷ ಡಾಲರ್ ವಹಿವಾಟು ನಡೆಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ವಿಜಯ.ಎಸ್.ಅತನೂರ, ವಿನೂತ್, ವೀಣಾ, ಮಹಮ್ಮದ, ರವಿಕುಮಾರ ಮೋದಿ, ನರಸು, ಸುರೇಶ, ರಾಜೇಶ್ವರಿ ಸೇರಿದಂತೆ ಸುಮಾರು 75ಕ್ಕೂ ಹೆಚ್ಚು À ಮಹಿಳೆಯರು ಭಾಗವಹಿಸಿದ್ದರು ಎಂದು ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.