ಸಿದ್ದರಾಮಯ್ಯ ಸ್ವಾರ್ಥ ರಾಜಕಾರಣಿ: ಪ್ರಸಾದ್

ಮೈಸೂರು: ಮೇ.04:- ಸಿದ್ದರಾಮಯ್ಯ ಸ್ವಾರ್ಥ ರಾಜಕಾರಿಣಿಯಾಗಿ ತಾವು ಮುಖ್ಯಮಂತ್ರಿಯಾಗಲು ತಮ್ಮ ಪಕ್ಷದ ಪರಮೇಶ್ವರವರನ್ನು ಸೋಲಿಸಿದರು ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.
ವರುಣ ವಿಧಾನಸಭಾ ಕ್ಷೇತ್ರ ನಾಡನಹಳ್ಳಿ ಶ್ರೀ ಲಕ್ಷಿಕಲ್ಯಾಣ ಮಂಟಪದಲ್ಲಿ ಬಿಜೆಪಿ ಎಸ್.ಸಿ. ಮೋರ್ಚಾ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ನನ್ನ ಐವತ್ತು ವರ್ಷ ರಾಜಕಾರಣದ ಜೀವನದಲ್ಲಿ ನಾನು ಹಂತ ಹಂತವಾಗಿ ಹೋರಾಟ ಮಾಡಿ ಬಂದಿದ್ದೇನೆ. ಯಾರಿಗೂ ನಾನು ತಲೆಬಾಗುವುದಿಲ್ಲ. ಸಿದ್ದರಾಮಯ್ಯ ಕ್ಷೇತ್ರಗಳನ್ನು ಅಲೆದು ಕೊನೆಗೆ ವರುಣಕ್ಕೆ ಬಂದಿದ್ದಾರೆ. ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಸ್ವಾತಂತ್ರ್ಯ ಬಂದ ಮೇಲೆ ದಲಿತರ ಸ್ಥಿತಿಗತಿಗಳು ಏನಿದೆ ಎಂಬುದನ್ನು ವಿಶೇಷವಾಗಿ ನರೇಂದ್ರ ಮೋದಿ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದೇನೆ. ಕಾಂಗ್ರಸ್ ಸರ್ಕಾರದಿಂದ ದಲಿತರಿಗೆ ಏನು ಅನುಕೂಲಗಳಾಗಿಲ್ಲ. ಕಾಂಗ್ರೆಸ್‍ನಲ್ಲಿ ದಲಿತರನ್ನು ಬೆಳೆಯಲು ಬಿಡುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಹೋರಾಟಗಾರರಲ್ಲ ಅವರು, ಅವಕಾಶವಾದಿಯಾಗಿದ್ದು ಎಂದು ಹೋರಾಟ ಮಾಡಿ ಮೇಲೆ ಬಂದಿಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್.ಸಿ.ಮೋರ್ಚಾ ಅಧ್ಯಕ್ಷ ಸಿ.ಎಂ.ಮಹದೇವಯ್ಯ, ನಟ ಕೆ.ಶಿವರಾಂ, ವರುಣ ಮಂಡಲ ಅಧ್ಯಕ್ಷ ವಿಜಯಕುಮಾರ್, ಜಿಪಂ ಮಾಜಿ ಸದಸ್ಯ ಸದಾನಂದ, ಗುರುಸ್ವಾಮಿ, ಕಾಪು ಸಿದ್ದಲಿಂಗಸ್ವಾಮಿ, ಬಿಜೆಪಿ ಚುನಾವಣಾ ವೀಕ್ಷಕ ಚನ್ನೈ ರಾಜ್ಯದ ಪ್ರಕಾಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ಅರಕಲವಾಡಿ ನಾಗೇಂದ್ರ, ಮುಖಂಡರಾದ ನರಸಿಂಹ ಮೂರ್ತಿ, ವರಹಳ್ಳಿ ನಾಗೇಂದ್ರ, ಶ್ರೀಧರ ಶಿವಯ್ಯ, ಎಂ.ಮಂಜು ಆನಂದರಾಜು, ಬಲರಾಜು, ನರಸಿಂಹಮೂರ್ತಿ ಸೇರಿ ಇನ್ನಿತರರು ಭಾಗವಹಿಸಿದ್ದರು.