
ಬೆಂಗಳೂರು,ಏ.೨೮-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಕೊಂಚ ದೂರದಲ್ಲೇ ಇರುವ ಆರ್?.ಟಿ ನಗರದ ವ್ಯಾಪ್ತಿಯ ಚೆಕ್??ಪೋಸ್ಟ್? ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ೧೦ ಲಕ್ಷ ಹಣವನ್ನ ಜಪ್ತಿ ಮಾಡಲಾಗಿದೆ.
ಕಾರು ತಪಾಸಣೆ ವೇಳೆ ಅಕ್ರಮ ಹಣ ಪತ್ತೆಯಾಗಿದ್ದು, ಮೊಹಮ್ಮದ್? ಷರೀಫ್?, ಮಹಮ್ಮದ್? ಯುನೂಸ್? ಎಂಬುವವರನ್ನ ವಶಕ್ಕೆ ಪಡೆದು, ಆರ್?.ಟಿ.ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ವೇಳೆ ತಾವು ಮೊಬೈಲ್ ಸೇಲ್ಸ್ ಅಂಡ್ ಸರ್ವಿಸ್ ಶೋ ನಡೆಸುತ್ತಿರುವುದಾಗಿ ಕಾರಿನ ಮಾಲೀಕ ಹೇಳಿದ್ದು ಹೆಚ್ಚಿನ ವಿಚಾರಣೆಯನ್ನು ಕೈಗೊಳ್ಳಲಾಗಿದೆ.
೯೩ ಲಕ್ಷ ಹಣ ಜಪ್ತಿ:
ಕುಮಟಾ ತಾಲೂಕಿನ ಚಂದಾವರ ಚೆಕ್?ಪೋಸ್ಟ್?ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ೯೩ ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ.
ಆಟೋದಲ್ಲಿ ಸಾಗಾಟ ಮಾಡುತಿದ್ದ ವೇಳೆ ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದ್ದು, ಈ ವೇಳೆ ಅಕ್ರಮ ಹಣ ಇರುವುದು ಪತ್ತೆಯಾಗಿದೆ. ಈ ಹಣವನ್ನ ಶಿವಮೊಗ್ಗದಿಂದ ಕುಮಟಾಕ್ಕೆ ತರಲಾಗುತ್ತಿದ್ದು, ಕೆಎ೧೪ ಸಿ ೪೮೭೪ ನೊಂದಣಿ ಹೊಂದಿರುವ ಆಟೋವನ್ನು ಹಾಗೂ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಕುಮಟಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.