
ಹುಬ್ಬಳ್ಳಿ,ಮೇ16: ಜೈಂಟ್ಸ್ ವೆಲ್ಫೇರ್ ಪೌಂಢೇಶನ್ ಜೈಂಟ್ಸ್ ಗ್ರುಪ್ ಆಫ್ ರಾಜಧಾನಿ ಕಾಲನಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ಮಲ್ಲಿಕಾರ್ಜುನ ಆರ್. ಪಾಟೀಲ, (ಮಳೆನೀರು ಸಂಗ್ರಹ ಹಾಗೂ ಪರಿಸರ), ಡಾ. ಕವಿತಾ ಎಸ್. ಬೆಂತೂರ, ಗೈನೋಕಾಲಾಜಿಸ್ಟ ಮತ್ತು ಅಪ್ಪಾಸಾಹೇಬ ಚವ್ಹಾಣರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷರಾದ ರಾಕೇಶ ಚವ್ಹಾಣ, ಸೋಮೇಶ್ವರ ಶೇಟ್, ಚನ್ನಬಸಪ್ಪ ಧಾರವಾಡಶೆಟ್ಟರ, ಶ್ರೀಮತಿಯರಾದ ತಾರಾದೇವಿ ವಾಲಿ, ಪದ್ಮಜಾ ಉಮರ್ಜಿ, ಸುಚಿತ್ರಾ ಹೊಸೂರು, ವಾಣಿಶ್ರೀ, ತಿಳವಳ್ಳಿ, ಅಕ್ಷತಾ, ಆರ.ವಿ.ಕವಿಶೆಟ್ಟಿ, ಎನ್.ಬಿ.ಹೊಸೂರು, ಜಿ.ಎಸ್.ನಾಯಕ, ಡಿ.ಬಿ.ಜವಳಿ, ರಘುನಾಥ ಮಗಜಿಕೊಂಡಿ, ಜಿ.ಎಲ್. ಹಬೀಬ, ಗಣಪತಿ ಅಯ್ಯರ, ಮುಂತಾದವರು ಉಪಸ್ಥಿತರಿದ್ದರು.