ಸಾಧಕರಿಗೆ ಗುರುತಿಸಿ ಪೆÇ್ರೀತ್ಸಾಹಿಸುವುದು ಅಗತ್ಯ : ಪಿಸ್ತಿ

ಕಲಬುರಗಿ,ಜು.2-ಸಮಾಜದಲ್ಲಿ ಅನೇಕ ಜನರು ಎಲೆಮರೆಯ ಕಾಯಿಯಂತೆ ಸಾಧನೆ ಮಾಡಿದ್ದಾರೆ. ಅವರನ್ನು ಗುರುತಿಸಿ, ಪೆÇ್ರೀತ್ಸಾಹ ನೀಡಿದರೆ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿಕಲಚೇತನ ಸಾಧಕ ನಿತೀನ್ ಡಿ.ರಂಗದಾಳ ಅವರ ಸಾಧನೆಗೆ ಸರ್ಕಾರ ಗುರುತಿಸಿ ಪೆÇ್ರೀತ್ಸಾಹ ನೀಡಬೇಕು ಎಂದು ಮಹಾನಗರ ಪಾಲಿಕೆ ಉಪಮಹಾಪೌರ ಶಿವಾನಂದ ಪಿಸ್ತಿ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್. ನಗರದಲ್ಲಿರುವ ಕೊಹಿನೂರ ಕಂಪ್ಯೂಟರ್ ತರಬೇತಿ ಕೇಂದ್ರದ ಸಭಾಂಗಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ರಂಗದಾಳ ಅವರಲ್ಲಿರುವ ಮನೋಸ್ಥೈರ್ಯ, ಸಾಹಸ, ನಿರ್ದಿಷ್ಟ ಗುರಿ, ಕಾಯಕ ಪ್ರಜ್ಞೆ ಅವರನ್ನು ಸಾಧನೆ ಮಾಡಲು ಪ್ರೇರಣೆ ನೀಡಿದೆ. ವಿಕಲಚೇತನರಾಗಿದ್ದು, ಸಾಮನ್ಯರನ್ನು ಮೀರಿಸುವ ಸಾಧನೆ ಮಾಡಿ, ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿತಿನ್ ಡಿ.ರಂಗದಾಳ ಅವರು, ಸ್ವಯಂ ಉದ್ಯೋಗ ಮಾಡಬೇಕು ಎಂಬ ಉದ್ದೇಶದಿಂದ ನಾಟಿ ಕೋಳಿ ಸಾಕಾಣಿಕೆ ಆರಂಭಿಸಿದ್ದೇನೆ. ಗಣಜಲಖೇಡ ಗ್ರಾಮದ ಜಮೀನಿನಲ್ಲಿ ನಾಟಿ ಕೋಳಿ ಫಾರ್ಮ್ ಆರಂಭಿಸಿ 500 ನಾಟಿ ಕೋಳಿ ಸಾಕಾಣಿಕೆ ಮಾಡುತ್ತಿದ್ದೇನೆ. ಇದರ ಜೊತೆಗೆ ನಾಟಿ ಸಾಕಾಣಿಕೆಯ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದೇನೆ. ನಾಟಿ ಕೋಳಿ ಸಾಕಾಣಿಕೆ ಉದ್ಯಮದಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 200 ಜನರಿಗೆ ಉದ್ಯೋಗ ದೊರಕಿದಂತಾಗಿದೆ. ನಾಟಿ ಕೋಳಿ ಸಾಕಾಣಿಕೆ ಫಾರ್ಮ್ ಆರಂಭಿಸುವುದರ ಮೂಲಕ ತಿಂಗಳಿಗೆ 1 ಲಕ್ಷದವರೆಗೆ ಆದಾಯಗಳಿಸಬಹುದಾಗಿದೆ. ಆಸಕ್ತ ಯುವಕರು ಮುಂದೆ ಬಂದರೆ ಅವರಿಗೆ ನಾಟಿ ಕೋಳಿ ಸಾಕಾಣಿಕೆಯ ಬಗ್ಗೆ ತರಬೇತಿ, ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಗುರುರಾಜ ಮತ್ತಿಮುಡ, ಶಿವಕುಮಾರ ಬಾಳ್ಳಿ, ಪ್ರಮುಖರಾದ ದಶರಥ ರಂಗದಾಳ, ಎಚ್.ಬಿ.ಪಾಟೀಲ, ಡಾ.ಸತೀಶ್ ಟಿ.ಸಣಮನಿ, ರಾಜಶೇಖರ ಮರಡಿ, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ನೀಲಕಂಠಯ್ಯ ಹಿರೇಮಠ, ವೀರೇಶ ಬೋಳಶೆಟ್ಟಿ ನರೋಣಾ, ಚಂದ್ರಶೇಖರ ಪಾಟೀಲ, ಅಮರನಾಥ ಶಿವಮೂರ್ತಿ, ಲಕ್ಷ್ಮೀಕಾಂತ ರಂಗದಾಳ, ಗುರುದೇವಪ್ಪ ರಾಮಶೆಟ್ಟಿ, ಡಾ.ಕಾಶಿನಾಥ ಲೋಕಂಡೆ, ಪೀರಪ್ಪ ಝಾಪುರ, ಎಸ್.ಬಿ.ಹರಿಕೃಷ್ಣ, ಅಭಯ ಪ್ರಕಾಶ, ಬಸವರಾಜ ಎಸ್. ಪುರಾಣೆ, ದತ್ತಾ ಕಟಾರೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.