
ದಾವಣಗೆರೆ, ಮೇ.2; ವಿದ್ಯಾಭ್ಯಾಸದಲ್ಲಿ ಮಕ್ಕಳು ಕೇವಲ ಪಠ್ಯಪುಸ್ತಕ ಪರೀಕ್ಷೆಗಳಿಗೆ ಅಷ್ಟೇ ಸೀಮಿತವಾಗದೆ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಕಡೆಗೆ ಹೆಚ್ಚು ಹೊತ್ತು ಕೊಟ್ಟಾಗ ಶಿಕ್ಷಣಕ್ಕೆ ಪರಿಪೂರ್ಣತೆ ಬರುತ್ತದೆ ಮಕ್ಕಳಲ್ಲಿ ಸಂಸ್ಕೃತಿ ಸಾಹಿತ್ಯಿಕ ಪರಿಕಲ್ಪನೆ ಅರಿವು ಮೂಡಿಸಲು ರಜಾ ಸಮಯದಲ್ಲಿ ಬೇಸಿಗೆ ಶಿಬಿರ ಸೂಕ್ತ ಇದರಿಂದಾಗಿ ಮಕ್ಕಳಲ್ಲಿ ಸಾಮಾಜಿಕ ಕಾಳಜಿ ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಕೆಲವು ಪೋಷಕರು ಕೇವಲ ನಕಾರಾತ್ಮಕ ಸಂದೇಶಗಳ ಟಿವಿ ಧಾರವಾಹಿಗಳಿಗೆ ತಲ್ಲಿನರಾಗುವ ಬದಲು ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚು ಹೊತ್ತು ಕೊಡಬೇಕಾದ ಅಗತ್ಯವಿದೆ ಎಂದು ಕಲಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ಶೆಣೈ ರವರು ತಮ್ಮ ಅನಿಸಿಕೆ ಹಂಚಿಕೊಂಡರು. ದಾವಣಗೆರೆಯ ಕಲಾಕುಂಚ ಡಿಸಿಎಂ ಶಾಖೆ ಮತ್ತು ಗೋಲ್ಡನ್ ಪಬ್ಲಿಕ್ ಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಮಕ್ಕಳ ಬೇಸಿಗೆ ಶಿಬಿರ ಚಿನ್ನರ ಚಿಲಿಪಿಲಿ ಸರಳ ಸಮಾರಂಭ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಶೆಣೈರವರು ಮಾತನಾಡಿದರು, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೋಲ್ಡನ್ ಪಬ್ಲಿಕ್ ಶಾಲೆಯ ಸಂಸ್ಥಾಪಕರಾದ ಶ್ರೀಮತಿ ಕುಸುಮ ಶಿವಕುಮಾರ್ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ವಿವಿಧ ಪ್ರತಿಭೆಗಳನ್ನು ಅನಾವರಣಗೊಳಿಸಿ ಅವರನ್ನು ಎಲ್ಲಾ ಆಯಾಮಗಳಲ್ಲಿ ಬೆಳೆಸುವ ಸದುದ್ದೇಶ ಈ ಶಿಬಿರ. ಮಕ್ಕಳು ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ, ಬದ್ಧತೆ, ಸಾಮಾಜಿಕ ಕಾಳಜಿಗಳೊಂದಿಗೆ ಅಳವಡಿಸಿಕೊಂಡಾಗ ಅವರ ಮುಂದಿನ ಸಾಧನೆಗೆ ಪೂರಕವಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಲಾಕುಂಚ ಡಿಸಿಎಂ ಶಾಖೆ ಅಧ್ಯಕ್ಷರಾದ ಶ್ರೀಮತಿ ಶಾರದಮ್ಮ ಶಿವನಪ್ಪ, ಹಿರಿಯ ಚಿತ್ರ ಕಲಾವಿದರದ ಚಂದ್ರಶೇಖರ್.ಎಸ್.ಸAಗ, ಡಿಸಿಎಂ ಟೌನ್ಶಿಪ್ನ ನಾಗರಿಕ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಶಿವನಪ್ಪ ಮಾತನಾಡಿ ಕಲಾಕುಂಚದ ಕಳೆದ 33 ವರ್ಷಗಳ ನಿರಂತರ ಸಾಂಸ್ಕೃತಿಕ ಚಟುವಟಿಕೆಗಳು ಇತರ ಸಂಘಟನೆಗಳಿಗೆ ಮಾದರಿ ವಾಣಿಜ್ಯ ನಗರಿ ದಾವಣಗೆರೆಯನ್ನು ಸಾಂಸ್ಕೃತಿಕ ನಗರಿಯನ್ನಾಗಿ ಪರಿವರ್ತಿಸಲು ಈ ಸಂಸ್ಥೆ ಮುಂಚನೆಯಲ್ಲಿ ಇದೆ ಎಂದರು. ಕುಮಾರಿಯರಾದ ಮಾನಸ ಶಾಲಿನಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭ ಸಮಾರಂಭಕ್ಕೆ ಶಿಕ್ಷಣ ಸಮಿತಿ ಸಂಘಟನೆ ಕಾರ್ಯದರ್ಶಿ ಎಂ.ಎನ್.ಮೃತ್ಯುಂಜಯ ಸ್ವಾಗತಿಸಿದರು, ಪ್ರಸ್ತಾವನೆಯಾಗಿ ಮಾತನಾಡಿದ ಶ್ರೀಮತಿ ಸುಮಾ ಏಕಾಂತಪ್ಪ ಕಾರ್ಯಕ್ರಮ ನಿರೂಪಿಸಿದರು ಕೊನೆಯಲ್ಲಿ ಕಲಾಕುಂಚದ ಸಕ್ರಿಯ ಸದಸ್ಯರಾದ ನಾರಪ್ಪ ಬಣಕಾರ ವಂದಿಸಿದರು