
ತಾಳಿಕೋಟೆ:ಆ.11: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಾಳಿಕೋಟೆ ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಗುಂಪು ಆಟಗಳ ಸ್ಪರ್ಧೆಯಲ್ಲಿ ಮತ್ತು ವೈಯಕ್ತಿಕ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿದ್ದಾರೆ.
ಬಾಲಕರ ವಾಲಿಬಾಲ್ ಪ್ರಥಮಸ್ಥಾನ :- ಹಣಮಂತ್ರಾಯಗೌಡ ಬಿರಾದಾರ ತಂಡ, ಬಾಲಕಿಯರ ಕಬ್ಬಡಿ ಪ್ರಥಮಸ್ಥಾನ :-ಕುಮಾರಿ ಭಾಗ್ಯಶ್ರೀ ಬಿರಾದಾರ ತಂಡ, ಬಾಲಕರ ರಿಲೆ ಪ್ರಥಮಸ್ಥಾನ :- ಅಜೇಯ ಚಲವಾದಿ ತಂಡ, ಬಾಲಕಿಯರ ರಿಲೆ ಪ್ರಥಮಸ್ಥಾನ :- ಶಿವರಂಜನಿ ಜೋಶಿ ತಂಡ, ಬಾಲಕರ ಕಬ್ಬಡಿ ದ್ವಿತೀಯ ಸ್ಥಾನ :- ಭೀಮನಗೌಡ ಚೌದ್ರಿ ತಂಡ, ಬಾಲಕರ ಖೋ ಖೋ ದ್ವಿತೀಯ ಸ್ಥಾನ :- ಕೈಲಾಸ ಚೌದ್ರಿ ತಂಡ, ವೈಯಕ್ತಿಕ ಸ್ಪರ್ಧೆಯಲ್ಲಿ ಬಾಲಕರ 200 ಮೀ ಓಟ ಪ್ರಥಮಸ್ಥಾನ :- ಭೀಮಾಶಂಕರ ಕಾಮಣ್ಣ ಹುದ್ದಾರÀ, ಬಾಕಿಯಯರ 400 ಮೀ ಓಟ ಪ್ರಥಮಸ್ಥಾನ :- ಶ್ರೀರಕ್ಷಾ ಚಿಮ್ಮಲಗಿ, ಗುಂಡು ಎಸೆತದಲ್ಲಿ ಪ್ರಥಮಸ್ಥಾನ :- ಉಸ್ಮಾನಗಣಿ ಹಂಡೆಬಾಗ ಬಾಲಕಿಯಯರ 100 ಮೀ ಓಟ ದ್ವಿತೀಯಸ್ಥಾನ :- ಸೌಜನ್ಯಾ ಅಶೋಕ ಗೊಟಗುಣಕಿ, ಬಾಲಕರ 100 ಮೀ ಓಟ ದ್ವಿತೀಯಸ್ಥಾನ :- ಆಕಾಶ ಆದಪ್ಪ ಸರ್ಜಾಪೂರ, ಬಾಲಕಿಯಯರ 200 ಮೀ ಓಟ ದ್ವಿತೀಯಸ್ಥಾನ :- ಸಹನಾ ಕುಲಕರ್ಣಿ ಬಾಲಕರ 600 ಮೀ ಓಟ ದ್ವಿತೀಯಸ್ಥಾನ :- ಭೀಮಾಶಂಕರ ಕಾಮಣ್ಣ ಹುದ್ದಾರ, ಬಾಲಕರ 400 ಮೀ ಓಟ ತೃತೀಯಸ್ಥಾನ :- ಆಕಾಶ ಆದಪ್ಪ ಸರ್ಜಾಪೂರ ಅವರು ವಿಜಯಶಾಲಿಯಾಗಿ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಹೋಬಳಿಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡ ಎಲ್ಲ ವಿಧ್ಯಾರ್ಥಿಗಳಿಗೆ ಶಾಲಾ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಬ ಮಂಗಳೂರ, ಮುಖ್ಯಗುರುಗಳಾದ ಸಂತೋಷ ಪವಾರ, ರಾಜು ಜವಳಗೇರಿ ದೈಹಿಕ ಶಿಕ್ಷಕರಾದ ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ಬಸವರಾಜ ಸವದತ್ತಿ, ರವಿಕುಮಾರ ಮಲ್ಲಬಾದಿ, ಭೀಮನಗೌಡ ಸಾಸನೂರ, ಸಿದ್ದನಗೌಡ ಮುದ್ನೂರ, ಸಂಗಮೇಶ ಬಿರಾದಾರ, ಜಯಶ್ರೀ ಮೊಕಾಶಿ, ರಸೂಲಸಾ ತುರಕಣಗೇರಿ, ರೂಪಾ ಪಾಟೀಲ, ಶಿವಲೀಲಾ ಚುಂಚುರ, ರೇಷ್ಮಾ ನಧಾಫ್, ಎನ್,ಐ,ಕಲ್ಲಶೆಟ್ಟಿ, ಶರಣಗೌಡ ಕಾಚಾಪೂರ, ಸÀಂಗೀತಾ ನಾಯ್ಕ, ಸಂಗೀತಾ ಬಿರಾದಾರ, ಲಕ್ಷ್ಮೀ ಚುಂಚುರ, ಅಂಬುಜಾ ಹಜೇರಿ, ಕಾವೇರಿ ಕೂಚಬಾಳ, ರೂಪಾ ಬಿರಾದಾರ, ದೇವಕೆಮ್ಮ ಬಲಕಲ್ಲ, ಸುಮಯ್ಯಾ ಮುಲ್ಲಾ, ಪ್ರೇಮಾ ನಾಯ್ಕ, ವಿದ್ಯಾಶ್ರೀ ಗಿರಿನಿವಾಸ ಭಾಗ್ಯಶ್ರೀ ಗಿರಿನಿವಾಸ, ಸೀಮಾ ನಾಯ್ಕ, ಗಿರೀಶ ಎಚ್, ಬಸವರಾಜ ತಂಗಡಗಿ,ನಜೀರ ಬಳವಾಟ ಹಾಗೂ ಸರ್ವ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.