ಸೊರಬ.ಮೇ.4: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ಶಿವಮೊಗ್ಗ ಜಿಲ್ಲೆಯನ್ನು 2023 ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸುವುದರಲ್ಲಿ ನಂ.1 ಜಿಲ್ಲೆಯನ್ನಾಗಿ ಮಾಡುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು. ಪ್ರಾಂಶುಪಾಲರಾದ ಹೇಮಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕರಾದ ರಾಜಪ್ಪ.ಎಂ.ಹೆಚ್, ಯೋಗೀಶ್,ಜೋಶಿ, ರಾಜಶೇಖರ್ ಗೌಡ, ದಿವ್ಯ ಕುಮಾರ್, ಶೀತಲ್,ಪವಿತ್ರ,ಜಾಹೀರ್,ವರ್ಷ, ನಾಗರಾಜ್, ಪ್ರಮೋದ್,ಮಿಲನ,ಚಂದ್ರಪ್ಪ, ಗುರು ದತ್ತ, ಮಧು, ಸಂದೀಪ್,ಕವನ, ಕೀರ್ತಿ ಸೇರಿದಂತೆ ವಿದ್ಯಾರ್ಥಿಗಳು ಮೊದಲಾದವರಿದ್ದರು.