ಸರ್ಕಾರದ ಮಧ್ಯಂತರ ಪರಿಹಾರ ಆದೇಶ, ಎನ್‌ಪಿಎಸ್ ಕುರಿತು ಹೇಳಿಕೆ ಸಮಾಧಾನ ತಂದಿಲ್ಲ

ಸಿರವಾರ,ಮಾ.ಂ೧- ಸರ್ಕಾರ ಸರ್ಕಾರಿ ನೌಕರರಿಗೆ ಹೊರಡಿಸಿದ ಶೇಕಡ ೧೭% ಮಧ್ಯಂತರ ಪರಿಹಾರದ ಆದೇಶ ಶಿಕ್ಷಕರಿಗೆ/ ನೌಕರರಿಗೆ ಸಮಾಧಾನ ತಂದಿಲ್ಲ ಎಂದು ಸಿರವಾರ ತಾಲೂಕು ಎನ್.ಪಿ.ಎಸ್ ನೌಕರ ಸಂಘದ ಅಧ್ಯಕ್ಷರಾದ ಜಾಹೀದ್ ಪಾಶ ಕುರ್ಡಿ ಹೇಳಿದ್ದಾರೆ. ಸಂಜೆವಾಣಿಯೊಂದಿಗೆ ಮಾತನಾಡಿದ ಅವರು, ಈ ಹಿಂದೆ ವೇತನ ಪರಿಷ್ಕರಣೆಯಾಗಿ ದಿ. ೦೧-೦೭-೨೦೨೨ಕ್ಕೆ ೫ ವರ್ಷ ಪೂರ್ಣಗೊಂಡಿದ್ದು, ಕನಿಷ್ಠ ಮಧ್ಯಂತರ ಪರಿಹಾರವನ್ನು ದಿ. ೦೧-೦೭- ೨೦೨೨ ರಿಂದಲೇ ಅನ್ವಯಿಸಿ ಆದೇಶಿಸಬೇಕಿತ್ತು. ಈಗ ಮಧ್ಯಂತರ ಪರಿಹಾರ ದಿ. ೦೧-೦೪-೨೦೨೩ರಿಂದ ಘೋಷಿಸಿರುವುದು ನೌಕರರಿಗೆ ಅಸಮಾಧಾನ ತಂದಿದೆ.
ಹಾಗಾದರೆ ಸರ್ಕಾರ ಸಂಪೂರ್ಣ ವರದಿಯನ್ನು ಎಲ್ಲಿಂದ ಅನ್ವಯಿಸುತ್ತದೆ ಎಂಬ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಎನ್.ಪಿ.ಎಸ್ ಕುರಿತು ಈ ಹಿಂದೆಯೇ ಸಮಿತಿ ರಚನೆಯಾಗಿತ್ತು. ಈಗ ಮತ್ತೊಮ್ಮೆ ಸಮಿತಿ ರಚನೆ ಮಾಡಿರುವುದು ಎನ್.ಪಿ.ಎಸ್ ನೌಕರರಿಗೆ ತುಂಬಾ ನೋವಿನ ಸಂಗತಿಯಾಗಿದ್ದು, ಒಟ್ಟಾರೆಯಾಗಿ ಇವತ್ತಿನ ಬೆಳವಣಿಗೆಗಳು ರಾಜ್ಯದ ಬಹುತೇಕ ನೌಕರರಿಗೆ ಹಾಗೂ ಶಿಕ್ಷಕರಿಗೆ ಸಮಾಧಾನವನ್ನುಂಟು ಮಾಡಿಲ್ಲ ಎಂದರು.