ಬೀದರ:ಜೂ.5:ಮಕ್ಕಳಿಗೆ ವಿದ್ಯೆ ಕಲಿಸಿ, ಅವರು ಜವಾಬ್ದಾರಿ ನಾಗರಿಕರಾಗುವುದಕ್ಕೆ ಮಾರ್ಗದರ್ಶನ ಮಾಡುವ ಶಿಕ್ಷಕರು ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದಾರೆ ಎಂದು ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾದ ಡಾ. ಜಗನ್ನಾಥ ಹೆಬ್ಬಾಳೆ ಯವರು ಅಭಿಪ್ರಾಯ ಪಟ್ಟರು. ಅವರು ಇಂದು ರಾಣಿ ಕಿತ್ತೂರ ಚೆನ್ನಮ್ಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ- ಶಿಕ್ಛಕಿಯಾಗಿ ವಯೋನಿವೃತ್ತಿ ಹೊಂದಿರುವ ಮಂದಾಕಿನಿ ಉಪ್ಪಿನ ರವರ “ಸ್ನೇಹ-ಮಿಲನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ನಗರದ ವೈಷ್ಣವೀ ಕನ್ವೆನ್ಷನ್ ಹಾಲ್ ನಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಶಾಲೆಗೆ ಹೋಗಲು ಆರಂಭಿಸಿದ್ದಾಗ ಮಕ್ಕಳು ಮಣ್ಣಿನ ಮುದ್ದೆಯಂತಿರುತ್ತವೆ. ಕಲ್ಲನ್ನು ಕಟೆದು ಅದಕ್ಕೆ ಮೂರ್ತಿಯ ರೂಪವನ್ನು ಕೊಡುವ ಶಿಲ್ಪಿಯಂತೆ, ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಕೂಡ ಮಕ್ಕಳಿಗೆ ಆರಂಭಿಕ ಶಿಕ್ಷಣ ವನ್ನು ನೀಡುವ ಮೂಲಕ ಅವುಗಳು ಮುಂದೆ ಉನ್ನತ ಶಿಕ್ಷಣ ಪಡೆಯಲು ಬುನಾದಿ ಹಾಕುವ ಕೆಲಸವನ್ನು ಮಾಡುತ್ತಾರೆ ಎಂದು ನಿವೃತ್ತಿ ಹೊಂದಿದ ಶಿಕ್ಷಕಿಯನ್ನು ಬಣ್ನಿಸಿದರು. ಸನ್ಮಾನ ಸ್ವೀಕರಿಸಿದ್ದ ನಿವೃತ್ತ ಶಿಕ್ಷಕಿ ಮಂದಾಕಿನಿ ಉಪ್ಪಿನ ರವರು ಮಾತನಾಡುತ್ತ, ನಾನು ಕೆಲಸ ಮಾಡಿದ ಶಾಲೆಯ ಬಗ್ಗೆ ನನಗೆ ಹೆಮ್ಮೆ ಇದೆ. ಕೌಟುಂಬಿಕ ಕೆಲಸ ಕ್ಕಿಂತ ಶಾಲೆಯ ಕೆಲಸ ಹಾಗೂ ಮಕ್ಕಳಿಗೆ ಪಾಠ ಮಾಡುವುದಕ್ಕೆ ನಾನು ಹೆಚ್ಚಿನ ಮಹತ್ವ ನೀಡಿದ್ದೇನೆ. ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿರುವ ಸಂತೃಪ್ತಿ ನನಗಿದೆ ಎಂದು ನುಡಿದರು. ಶಿಕ್ಷಕ ರಾಜಶೇಖರ ಉಪ್ಪಿನ ರವರು ಸ್ವಾಗತ ಕೋರಿದರು. ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನರವರು ಪ್ರಾಸ್ತಾವಿಕವಾಗಿ ಮಾತನಾಡಿ, 37 ವರ್ಷ, 9 ತಿಂಗಳು 13 ದಿವಸಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಮಂದಾಕಿನಿಯವರು ಪರಿವಾರದ ಯಶಸ್ಸಿನಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕೊಂಡಾಡಿದರು. ಅರವಿಂದ ಕುಲಕರ್ಣಿಯವರು ನಿರೂಪಣೆ ಮಾಡಿ, ಅಭಿನಂದನಾ ಪತ್ರವನ್ನು ನೀಡಿದರು. ರಷ್ಮಿ-ನಾರಾಯಣರಾವ ಕಾಂಬಳೆಯವರು ಸ್ವಾಗತ ಗೀತೆಯನ್ನು ಹಾಡಿದರ. ನಿವೃತ್ತ ಉದ್ಯೋಗಿ ಮಲ್ಲಿಕಾರ್ಜುನ್ ರಾಸೂರ್ ರವರು ಸ್ನೇಹ ಮಿಲನದ ಅಧ್ಯಕ್ಷತೆ ವಹಿಸಿದ್ದರು. ರವಿ ಪಾಟೀಲ್ ರವರು ಕೊನೆಯಲ್ಲಿ ವಂದಿಸಿದರು. ವಿಜಯಕುಮಾರ್-ಲಕ್ಛ್ಮಿ, ತನುಷ, ಸತೀಷ ರಶ್ಮೀ ಅಂಬೆಸಂಗೆ, ಪ್ರಗ್ಯಾನ, ಸರಸ್ವತಿಬಾಯಿ, ತಾರಾ ಬಾಯಿ, ಶಾಂತಾಬಾಯಿ, ರೇಖಾ, ಡಾ. ರಾಹುಲ, ಕೇದಾರ್, ಜಗನ್ನಾಥ್ ಬುಕ್ಕಾ, ಉಮಾ, ಭೀಮರಾವ- ಜೈಶ್ರೀ, ಪ್ರವೀಣ-ಪವಿತ್ರಾ, ಗುರುನಾಥ-ಅರುಣಾ, ಸಾಯಿನಾಥ್-ಅನಿತಾ, ರಾಣಿ, ಹರ್ಷಿತಾ, ಸಂತೋಷಿ, ಸಾಗರ, ಅಮರ್, ಪ್ರಿಯಾಂಕಾ, ಮಲ್ಲಿಕಾರ್ಜುನ, ವಿಜಯಶ್ರೀ, ರಾಜಶ್ರಿ, ರಿಷಭ್, ಪಾರಮ್ಮ, ಚಂದ್ರಕಾಂತ ಲಕ್ಮಾಜಿ, ಡಾ. ಕಲ್ಪನಾ ದೇಶಪಾಂಡೆ, ನಾಗೇಂದ್ರ ದಂಡೆ, ಅಲ್ಲದೆ ಅಸಂಖ್ಯಾತ ಮಿತ್ರರು, ಹಿತಚಿಂತಕರು ಭಾಗವಹಿಸಿದ್ದರು.