
ಚಿತ್ರದುರ್ಗ.ಮಾ.೬ : 12ನೇ ಶತಮಾನದಲ್ಲಿ ಬಸವಾದಿ ಶರಣರು ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿಕೊಟ್ಟರು. ಸಮಾಜದಲ್ಲಿ ಮಡಿವಂತಿಕೆ ಇನ್ನೂ ಜೀವಂತ ಇದೆ. ಗಂಡು ಹುಟ್ಟಿದರೆ ಪೇಡ ಹಂಚುವರು, ಹೆಣ್ಣು ಹುಟ್ಟಿದರೆ ಪೀಡೆ ಎಂಬರು. ಇಂತಹ ಆಲೋಚನೆಗಳು ಸಮಾಜಕ್ಕೆ ಮಾರಕವಾಗಿವೆ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ಹೇಳಿದರು.ಶ್ರೀ ಮುರುಘರಾಜೇಂದ್ರಮಠದಲ್ಲಿ ನಡೆದ ಮೂವತ್ಮೂರನೇ ವರ್ಷದ ಮೂರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಭ್ರೂಣಹತ್ಯೆ ಕಾರಣದಿಂದ ಇಂದು ವಧುಗಳು ಸಿಗುತ್ತಿಲ್ಲ. ಇತ್ತೀಚೆಗೆ ಭ್ರೂಣಹತ್ಯೆ ಹೆಚ್ಚಾಗುತ್ತಿದೆ. ಇದು ಮಹಾಪಾಪ. ವರದಕ್ಷಿಣೆ ಕೊಡುವುದು, ತೆಗೆದುಕೊಳ್ಳುವುದು ಎರಡೂ ತಪ್ಪು. ನಾವು ಆದರ್ಶದ ಸಮಾಜದ ಕಡೆ ಸಾಗಬೇಕು. ಸಂಸಾರ ಸುಗಮವಾಗಬೇಕಾದರೆ ಪ್ರೀತಿ ಇರಬೇಕು. ನುಡಿದರೆ ಮುತ್ತಿನ ಹಾರದಂತಿರಬೇಕು. ನಮ್ಮ ಮಾತುಗಳು ಮುತ್ತು ಪೋಣಿಸಿದಂತಿರಬೇಕು. ಸತಿ ಪತಿಗಳು ಹಂಗಿಸಿ, ಚುಚ್ಚಿ ಮಾತನಾಡಬಾರದು. ನಮ್ಮ ಮಾತಿನಲ್ಲಿ ಸ್ವರ್ಗ ಮತ್ತು ನರಕ ಎರಡೂ ಇವೆ. ಅವುಗಳನ್ನು ಬಳಸಿಕೊಳ್ಳುವ ಬುದ್ಧಿವಂತಿಕೆ ವ್ಯಕ್ತಿಯಲ್ಲಿರಬೇಕಾಗುತ್ತದೆ ಎಂದರು.ರಾಣೇಬೆನ್ನೂರು ವಿರಕ್ತಮಠದ ಶ್ರೀ ಗುರುಬಸವ ಸ್ವಾಮಿಗಳು ಮಾತನಾಡಿ, ವಧು ವರರಲ್ಲಿ ತಾಳ್ಮೆ ಮುಖ್ಯ. ತಾಳ್ಮೆ ಇದ್ದರೆ ಏನೆಲ್ಲವನ್ನು ಜಯಿಸಬಹುದು. ಮನೆಯಲ್ಲಿರುವ ಹಿರಿಯರು ನವದಂಪತಿಗಳಿಗೆ ತಿಳುವಳಿಕೆ ನೀಡಬೇಕು. ತಾಳ್ಮೆಯಿಂದ ಬದುಕುವ ಕುಟುಂಬದಲ್ಲಿ ನೆಮ್ಮದಿ ಕಾಣಲು ಸಾಧ್ಯ. ಹಾಗಾಗಿ ಮನುಷ್ಯ ದ್ವೇಷವನ್ನು ಇಟ್ಟುಕೊಂಡು ಬದುಕಬಾರದು ಎಂದು ಹೇಳಿದರು.ಜಮಖಂಡಿ ಬಸವಕೇಂದ್ರದ ಶ್ರೀ ಬಸವರಾಜ ಸ್ವಾಮಿಗಳು ಮಾತನಾಡಿ, ಜೀವನದಲ್ಲಿ ಮದುವೆ ಮುಖ್ಯಘಟ್ಟ. ನಾವು ಬದುಕನ್ನು ಹೇಗೆ ಬದುಕುತ್ತಿz್ದೆÃವೆ ಎನ್ನುವುದು ಮುಖ್ಯ. ಮನುಷ್ಯನಲ್ಲಿ ಸಹನಾಶೀಲತೆ ಇರಬೇಕೆಂದರು.ಕರ್ಯಕ್ರಮದಲ್ಲಿ ಬೋವಿ(ವರ) ಮತ್ತು ಬೆಸ್ತರು(ವಧು) ಅಂತರ್ಜಾತಿ ವಿವಾಹ ಸೇರಿದಂತೆ ಒಟ್ಟು 8 ಜೋಡಿಗಳ ವಿವಾಹ ನೆರವೇರಿಸಲಾಯಿತು. ಜ್ಞಾನಮೂರ್ತಿ, ಪೈಲ್ವಾನ್ ತಿಪ್ಪೇಸ್ವಾಮಿ, ಗಂಜಿಗಟ್ಟೆ ಕೃಷ್ಣಮೂರ್ತಿ ಇದ್ದರು.