ಸನಾತನ ಹಿಂದೂ ಧರ್ಮಕ್ಕೆ ಏನು ಮಾಡಲಾಗದುಃ ಶಾಸಕ ಯತ್ನಾಳ

ವಿಜಯಪುರ, ಸೆ.26:ನಾವೆಲ್ಲ ಮೂಲ ಭಾರತೀಯ ಸನಾತನ ಸಂಸ್ಕøತಿಯತ್ತ ಮತ್ತೆ ಬರುತ್ತಿದ್ದೇವೆ ಎಂದು ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಹೇಳಿದರು.
ನಗರದ ಜೋರಾಪುರ ಪೇಠ ಶ್ರೀ ಶಂಕರಲಿಂಗ ಗಜಾನನ ಮಂಡಳಿಯ ಸಂಕಲ್ಪ ಸಿದ್ದಿ ಗಣಪತಿ ವಿಸರ್ಜನಾ ಮೆರವಣಿಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಮೂಲ ಸಂಸ್ಕೃತಿ, ಸಂಪ್ರದಾಯ ಇಡೀ ಜಗತ್ತಿಗೆ ಮಾದರಿ ಆಗಿದೆ. ಇಂತಹ ಮಹತ್ವವಾದ ಸಂಸ್ಕೃತಿ ಬಿಟ್ಟು ಎಲ್ಲೆಲ್ಲೋ ಹೋಗಿ ಮತ್ತೆ ಇಲ್ಲಿಯೇ ಬರುತ್ತಿದ್ದೇವೆ ಎಂದರು.
ಯಾರು ಏನೇ ಮಾಡಿದರು ನಮ್ಮ ಸನಾತನ ಹಿಂದು ಧರ್ಮಕ್ಕೆ ಏನು ಮಾಡಲಾಗದು. ಅದಕ್ಕೆ ಕಾರಣ ಅಷ್ಟೊಂದು ಮಹತ್ವ ನಮ್ಮ ಧರ್ಮ ಪಡೆದಿದೆ. ಇದು ದೇವರಿಂದ ಬಂದಿದ್ದು ಎಂದು ಹೇಳಿದರು.
ಬಾಲಗಾವ ಆಶ್ರಮದ ಅಮೃತಾನಂದ ಸ್ವಾಮೀಜಿ ಮಾತನಾಡಿ, ಡಿಜೆ ಬಂದ ಆಗಬೇಕು. ವಾಕರ್, ಲೇಜಿಮ್ ಬರಬೇಕು. ಇದು ವಿಜಯಪುರದಿಂದ ಆರಂಭಗೊಂಡಿದ್ದು, ಮುಂದೆ ಇದು ಟ್ರೆಂಡ್ ಆಗುವುದು ನಿಶ್ಚಿತ ಎಂದರು.
ಮೆರವಣಿಗೆಯಲ್ಲಿ ಮಂಡಳಿ ಸದಸ್ಯರಿಂದ ಲೆಜಿಮ್ ಹಾಗೂ ಮಹಿಳಾ ಸದಸ್ಯೆಯರಿಂದ ವಾರ್ಕರಿ ತಾಳದೊಂದಿಗೆ ಹೆಜ್ಜೆ ಕುಣಿತ ಪ್ರದರ್ಶನ ಗಮನ ಸೆಳೆಯಿತು. ನೆರೆದ ಸಾವಿರಾರು ಜನರ ಜಯಘೋಷಣೆಯಿಂದ ಪೆÇ್ರೀತ್ಸಾಹ ಹಾಗೂ ಮೆರಗು ಸಿಕ್ಕಿತು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯು ಅದ್ಧೂರಿಯಾಗಿ ಸಾಗಿ ನಗರದ ಐತಿಹಾಸಿಕ ತಾಜಬಾವಡಿ ಹತ್ತಿರದ ಕೃತಕ ಹೊಂಡದಲ್ಲಿ ಮೂರ್ತಿ ಗೌರವಪೂರ್ವಕವಾಗಿ ವಿಸರ್ಜಿಸಲಾಯಿತು.
ಈ ಸಂದರ್ಭದಲ್ಲಿ ಕಿರಣ ಭಟ ಜೋಶಿ, ಶ್ರೀ ಅಮೃತಾನಂದ ಮಹಾ ಸ್ವಾಮೀಜಿಗಳು (ಬಾಲಗಾವ ಅಶ್ರಮ), ಎಲ್‍ಎಂವಿ ಚಂದ್ರಯಾನ 3ರ ಸಿನಿಯರ್ ಮ್ಯಾನೇಜರ್ ಅರವಿಂದ್ ಅಳಗುಂಡಗಿ, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಆರ್.ಎಸ್.ಪಾಟೀಲ್ ಕೂಚಬಾಳ, ರಾಜಕುಮಾರ ಪಾಟೀಲ್, ಡಿವೈಎಸ್ಪಿ ಬಸವರಾಜ್ ಯಲಿಗಾರ, ಸಿಪಿಐ ಸಿದ್ದೇಶ, ಶಂಕರಲಿಂಗ ದೇವಸ್ಥಾನದ ಅಧ್ಯಕ್ಷರಾದ ವಿರುಪಾಕ್ಷಿ ಶಾಬಾದಿ, ಆಶೀಶ್ ಹುಣಶ್ಯಾಳ, ಮುಖಂಡರಾದ ಪ್ರಕಾಶ್ ಅಕ್ಕಲಕೋಟ ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ರಾಹುಲ್ ಜಾದವ್ ಕಿರಣ್ ಪಾಟೀಲ್ ಪಾಂಡು ಸಾಹುಕಾರ್ ದೊಡ್ಡಮನಿ, ವಿಜಯ್ ಜೋಶಿ. ಪಾಲಿಕೆಸದಸ್ಯರಾದ ವಿಠ್ಠಲ್ ಹೊಸಪೇಟೆ ಸಂಜೆ ಕೋಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.