ಸನಾತನ ಧರ್ಮ ಅವಹೇಳನ ಹೇಳಿಕೆಗೆ ಖಂಡನೆ

ಕಲಬುರಗಿ,ಸ 5: ತಮಿಳುನಾಡಿನ ಮುಖ್ಯಮಂತ್ರಿಯ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಅಖಿಲ ಭಾರತ ಬ್ರಾಹ್ಮಣ ಮಹಾ ಸಂಘದ ಜಿಲ್ಲಾಧ್ಯಕ್ಷ ರವಿ ಲಾತೂರಕರ ಖಂಡಿಸಿದ್ದಾರೆ.
ಸನಾತನ ಧರ್ಮದವನ್ನು ಡೆಂಗೆ,ಕೋವಿಡ್‍ಗೆ ಹೋಲಿಸಿ ಆ ರೋಗಗಳನ್ನು ನಾಶ ಮಾಡಿದಂತೆ ಸನಾತನ ಧರ್ಮವನ್ನು ನಾಶ ಮಾಡಬೇಕು ಎಂಬ ಹೇಳಿಕೆ ವಿವೇಚನೆ ಕಳೆದುಕೊಂಡ ಮತ್ತು ಅಹಂಕಾರದ ಪರಮಾವಧಿಯಾಗಿದೆ.ಸಾವಿರಾರು ವರ್ಷಗಳಿಂದ ದಾಳಿಕೋರರು,ಮತಾಂಧರು, ಅಕ್ರಮಕಾರರಾಗಿ ಬಂದು ನಾಶ ಮಾಡಲು ಪ್ರಯತ್ನಿಸಿದರೂ ನಾಶವಾಗದೇ ಇರುವದು ನಮ್ಮ ಭಾರತೀಯ ಸನಾತನ ಧರ್ಮ. ಇಲ್ಲಸಲ್ಲದ ಹೇಳಿಕೆ ಕೊಡುವ ಮೊದಲು ಸನಾತನ ಧರ್ಮದ ತಿರುಳಿನ ಬಗ್ಗೆ ತಿಳಿದುಕೊಳ್ಳಬೇಕು.
ಕೇವಲ ಪ್ರಚಾರಕ್ಕಾಗಿ ಸನಾತನಧರ್ಮವನ್ನು ಬಳಕೆ ಮಾಡಿಕೊಳ್ಳಬಾರದು.
ತಮ್ಮಹೇಳಿಕೆ ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.