
ಬೀದರ:ಮಾ.6:ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ಔರಾದ ವಿಧಾನಸಭಾ ಕ್ಷೇತ್ರದ ಖೇರ್ಡಾ ಹಾಗೂ ಸೋನಾಳ ಗ್ರಾಮದಲ್ಲಿ ಸಂಚರಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಖೇರ್ಡಾ ಗ್ರಾಮದಲ್ಲಿ ನಡೆಯುತ್ತಿದ್ದ ಚರಂಡಿ ಮತ್ತು ಸಿಡಿ ಕಾಮಗಾರಿಯ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಕೆಲಸದ ಗುಣಮಟ್ಟವನ್ನು ವೀಕ್ಷಿಸಿದರು. ಸಂಬಂಧಿಸಿದ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೆಲಸ ನಿಗದಿತ ಅವಧಿಯೊಳಗಾಗಿ ಪೂರ್ಣಗೊಳಿಸಬೇಕು. ಗುಣಮಟ್ಟದಿಂದ ಕೂಡಿರಬೇಕು. ಇಲಾಖೆ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೆಲಸ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕೆಂದು ನಿರ್ದೇಶನ ನೀಡಿದರು.
ನೊಂದ ಕುಟುಂಬಗಳಿಗೆ ನೆರವು: ಸೋನಾಳ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಇಸ್ಮಾಯಿಲಸಾಬ್ ಅವರ ಪುತ್ರ ಹಾಜಿಸಾಬ್ ಮರಣ ಹೊಂದಿದ್ದರು. ಲಕ್ಷ್ಮಿಬಾಯಿ ಅವರ ಪತಿ ಮನೋಹರ, ಸುಶ್ಮಿತಾ ಅವರ ಪತಿ ಶರಣಪ್ಪಾ ಹೃದಯಾಘಾತದಿಂದ ಮತ್ತು ಗೋಪಾಲರಾವ ಪಾಟೀಲ ಅವರ ಪುತ್ರ ಸಿದ್ದು ಅವರು ಆಕಸ್ಮಿಕವಾಗಿ ಮೃತಪಟ್ಟಿದ್ದರು. ಸಚಿವರು ಇವರ ಮನೆಗಳಿಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಇದೇ ವೇಳೆ ಕುಟುಂಬಸ್ಥರ ಸಮಸ್ಯೆಗಳನ್ನು ಆಲಿಸಿ, ವೈಯಕ್ತಿಕ ಧನಸಹಾಯ ಮಾಡಿದರು. ನಿಮ್ಮ ನೆರವಿಗೆ ನಾನು ಸದಾ ಸಿದ್ದನಿದ್ದೇನೆ. ಏನೆ ಸಮಸ್ಯೆಗಳಿದ್ದರೂ ಸಂಕೋಚವಿಲ್ಲದೇ ತಮ್ಮನ್ನು ಭೇಟಿಯಾಗಿ. ಅಗತ್ಯ ನೆರವು ನೀಡಲಾಗುವುದು. ಸರ್ಕಾರದ ಯೋಜನೆಗಳಡಿ ಅವಶ್ಯಕ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಾಜಿ ಪಾಟೀಲ ಮುಂಗನಾಳ, ದೋಂಡಿಬಾ ನರೋಟೆ, ಅನೀಲ ಬಿರಾದಾರ, ಪ್ರತೀಕ್ ಚವ್ಹಾಣ, ಅಮೀತ್ ರಾಠೋಡ, ಸಚಿನ ರಾಠೋಡ, ಧನಾಜಿ ರಾಠೋಡ, ಬಂಟಿ ರಾಂಪುರೆ, ಶಿವಾನಂದ ವಡ್ಡೆ, ಶಿವಕುಮಾರ ಝುಲ್ಫೆ, ನಾಗೇಶ ಪತ್ರೆ, ರಾಜಕುಮಾರ ಅಲಬಿದೆ, ಕೇರಬಾ ಪವಾರ, ಸಂತೋಷ ಪೆÇೀಕಲವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.