ಸಂಭ್ರಮದ ರಾಜ್ಯೋತ್ಸವ ಆಚರಣೆ

ಹುಬ್ಬಳ್ಳಿ, ನ1: ನಗರದ ಜೈನ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದ 50 ವರ್ಷಗಳ ಸಂಭ್ರಮವನ್ನ ವಿಭಿನ್ನ ರೀತಿಯಲ್ಲಿ ಆಯೋಜಿಸುವ ಉದ್ದೇಶದಿಂದ ಜೈನ್ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಪ್ರಾಂಶುಪಾಲರಾದ ಡಾ. ಪ್ರಶಾಂತ ಬಣಕಾರ ರವರು ದೇಸಿ ಕ್ರೀಡೆ 2023ನ್ನು ಆಯೋಜಿಸಿದ್ದರು.
ಕಂಪ್ಯೂಟರ, ಟಿವಿ, ಮೊಬೈಲ್‍ಗಳಿಗೆ ಹೊಂದಿಕೊಂಡಿರುವ ವಿದ್ಯಾರ್ಥಿಗಳಿಗೆ ನಮ್ಮ ನೆಲ, ನಾಡು, ಸಂಸ್ಕೃತಿ, ಕಲೆ ಗಳ ಮಹತ್ವ ತಿಳಿಸಲು ವಿವಿಧ ರೀತಿಯಾದ ದೇಸಿ ಕ್ರೀಡೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ಮತ್ತು ಮನೋರಂಜನೆ ನೀಡಲಾಯಿತು.
ಸುಮಾರು 100ಕ್ಕು ಹೆಚ್ಚು ವಿದ್ಯಾರ್ಥಿಗಳು ಕಬಡ್ಡಿ, ಕೋಕೋ, ಲಗೋರಿ, ಬುಗರಿ, ಗೋಲಿ, ಗಿಲ್ಲಿ ದಾಂಡು, ಹಾಗೂ ಹಗ್ಗ ಜಗ್ಗಾಟ, ಸ್ಪರ್ಧೆಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳನ್ನು ಯಶಸ್ವಿಗೊಳಿದರು.
ನಂತರ ಪ್ರಾಂಶುಪಾಲರು ಎಲ್ಲಾ ಸ್ಪರ್ಧೆ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಿ ನಮ್ಮ ನೆಲ, ಭಾಷೆ, ನಾಡು ನುಡಿಯ ಮಹತ್ವ ತಿಳಿಸಿದರು.
ಸಮಾರಂಭದಲ್ಲಿ ಕಾಲೇಜಿನ ಎಲ್ಲಾ ಭೋದಕ ಭೋದಕೆತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ದೇಸಿ ಕ್ರೀಡೆ 2023ರ ಸಂಘಟನೆ ಯನ್ನೂ ಪೆÇ್ರ ನವೀನ್ ಶಿರೂರು ಹಾಗೂ ಡಾ. ಭರತ್ ಕುಮಾರ್ ವಹಿಸಿಕೊಂಡಿದ್ದರು.