
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಸೆ.೨- ರಾಜ್ಯದಲ್ಲಿನ ಬರ ಘೋಷಣೆ ಕುರಿತು ನಾಡಿದ್ದು ಸೆ೪ ರಂದು ಸಂಪುಟ ಸಭೆಯಲ್ಲಿ ತಿರ್ಮಾನ ಆಗಲಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರಿಂದು ಅಲಮಟ್ಟಿಗೆ ತೆರಳುವ ಮುನ್ನ ಜಿಲ್ಲೆಯ ತೋರಣಗಲ್ಲು ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರೊಂದಿಗೆ ಮಾತನಾಡಿ. ಈಗಾಗಲೇ ಬರ ಅಂತಾ೧೧೩ ತಾಲೂಕುಗಳನ್ನು ಗುರುತಿಸಲಾಗಿದೆ. ಸಂಪುಟ ಸಭೆ ಬಳಿಕ ೭೩ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕು ಎಂಬ ಬಗ್ಗೆ ಚರ್ಚೆ ಮಾಡಲಿದೆ.
ಈಗಾಗಲೇ ೧೧೪ ತಾಲೂಕುಗಳಲ್ಲಿ ಜಂಟಿ ಸರ್ವೇ ಮಾಡಲಾಗಿದೆ. ಈ ಪೈಕಿ ೧೦೫ ತಾಲೂಕಿನಲ್ಲಿ ಬರ ಇದೆ ಅಂತಾ ವರದಿ ಬಂದಿದೆ, ವರದಿ ಆಧರಿಸಿ ತಿರ್ಮಾನ ಆಗಲಿದೆ. ಇನ್ನೂ ೭೩ ತಾಲೂಕುಗಳಲ್ಲೂ ಬರ ಇದೆ ಎಂದು ಹೇಳಲಾಗಿದೆ. ಈ ಬಗ್ಗೆ ವರದಿ ಪಡೆಯುತ್ತೇನೆ. ಜುಲೈ ಅಂತ್ಯಕ್ಕೆ
ಶೇ.೫೬ ರಷ್ಟು ಮಳೆ ಪ್ರಮಾಣ ಕಡಿಮೆ ಆಯ್ತು ಬಳಿಕ ಅಗಷ್ಟ್ನಲ್ಲೂ ಮಳೆ ಕಡಿಮೆ ಆಗಿದೆ ಎಂದರು.
ಕಾವೇರಿ ನೀರು ತಮಿಳುನಾಡಿಗೆ ಹರಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ. ತಮಿಳುನಾಡಿಗೆ ಬಿಡುಗಡೆ ಮಾಡಲು ನೀರಿಲ್ಲ ನೀರು ಬಿಡಬಾರದು ಎಂದೇನಿಲ್ಲ ಆದರೆ ಅಷ್ಟು ಪ್ರಮಾಣದ ನೀರಿಲ್ಲ. ಕಬಿನಿ ಜಲಾಶಯಕ್ಕೆ ನೀರು ಬರಬೇಕಿತ್ತು ಬಂದಿಲ್ಲ ಇದ್ಕೆಲ್ಲಲ್ಲಾ ಮೇಕೆ ದಾಟು ಯೋಜನೆ ಪರಿಹಾರ ಎಂದರು.
ಮೇಕದಾಟು ಯೋಜನೆಗೆ ಅನಗತ್ಯವಾದ ವಿರೋಧ ಮಾಡ್ತಾರೆಮೇಕೆದಾಟು ಯೋಜನೆ ಜಾರಿಯಾದರೆ ೬೭ ಟೆಎಂಸಿ ನೀರು ಉಳಿತಾಯ ಮಾಡಬಹುದು ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಬಹುದು ಎಂದ ಅವರು. ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡ್ಬೇಕು ಎಂದು ಒತ್ತಾಯಿಸಿದರು.