
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ 10: ತಾಲೂಕಿನ ಸಂಜೀವರಾಯನಕೋಟೆಯಲ್ಲಿ ಮತದಾರರಿಗೆ ಮತ ಚಲಾಯಿಸುವಂತೆ ಹೇಳುವ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಅದು ಘರ್ಷಣೆಗೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ತಲೆಗೆ ಪೆಟ್ಟಾಗಿರುವ ಘಟನೆ ನಡೆದಿದೆ.
ಬಿಜೆಪಿ ಮುಖಂಡ ಸೋಮನಗೌಡ ಮತ್ತವರ ಬೆಂಬಲಿಗರು ಕಾಂಗ್ರೆಸ್ ನ ಉಮೇಶಗೌಡ ಮೊದಲಾದವರ ಮನೆಗೆ ಮೇಲೆ ನುಗ್ಗಿ ಕಟ್ಟಿಗೆಗಳಿಂದ ಹೊಡೆದಿದ್ದು ತಲೆಗೆ ಪೆಟ್ಟಾಗಿದೆ ಘಟನೆಯಲ್ಲಿ ಇಬ್ಬರ ತಲೆಗೆ ತೀವ್ರ ಪೆಟ್ಟಾಗಿ ರಕ್ತ ಸ್ರಾವ ಆಗಿದೆ. ನಂತರ ಹೆಚ್ಚಿನ ಪೊಲೀಸ್ ಬಂದು ಪರಿಸ್ಥಿತಿಯನ್ನು ನಿಯಂತ್ರಸಿದ್ದಾರೆ.