
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.24: ನಗರದ ಸಂಚಾರಿ ಠಾಣೆಯಲ್ಲಿ ಇಂದು ಇಲ್ಲಿನ ಹೀರದ ಸೂಗಮ್ಮ ಶಾಲೆಯ ವಿದ್ಯಾರ್ಥಿಗಳ ಕಲರವವಿತ್ತು. ಪೊಲೀಸ್ ವ್ಯವಸ್ಥೆ ಯ ಬಗ್ಗೆ ಅರಿಯಲು, ಜನಸ್ನೇಹಿ ಪೊಲೀಸ್ ಬಗ್ಗೆ ತಿಳಿಸುವುದು ಇದರ ಉದ್ದೇಶವಾಗಿತ್ತು.
ಪೊಲೀಸರು ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆ ಯಲ್ಲಿಯ ಕೆಲಸ ಕಾರ್ಯಗಳನ್ನು ಸವಿವರವಾಗಿ ವಿವರಿಸಿದರು
ವಿದ್ಯಾರ್ಥಿಗಳು ತಾವುಗಳು ರಸ್ತೆಯಲ್ಲಿ ಸಂಚರಿಸುವಾಗ ಪೊಲೀಸ್ ನಿಯಮಗಳನ್ನು ತಿಳಿದುಕೊಂಡು ರಸ್ತೆಯಲ್ಲಿ ಆಗುವ ಅಪಘಾತ ದಿಂದ ಅಂಗ ವಿಕಲರಾಗಿ ಜೀವನ ದಲ್ಲಿ ನೋವು ಅನುಭವಿಸುವುದು ತಪ್ಪಿಸುವಂತೆ ಕಿವಿ ಮಾತು ಹೇಳಿದರು. ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತಾವುಗಳು ಕಟ್ಟುನಿಟ್ಟಿನ ಸಂಚಾರಿ ನಿಯಮ ಪಾಲಿಸುವಂತೆ ತಿಳಿಸಿದರು.
ಅಪಘಾತ ವಾದರೆ ವಿಡಿಯೋ ಮಾಡುವುದು ಬಿಟ್ಟು ಅಪಘಾತಕ್ಕಿಡಾದವರನ್ನು ಆಸ್ಪತ್ರೆಗೆ ಸೇರಿಸುವುದು ಸೇರಿಸುವುದುದಕ್ಕೂ ಮುಂಚೆ ಪ್ರಥಮ ಚಿಕಿತ್ಸೆ ಕೊಡಲು ತಿಳಿಹೇಳಿದರು. ವಿದ್ಯಾರ್ಥಿಗಳಿಗೆ ತಮ್ಮ ಕುಟುಂಬದವರು ವಾಹನ ತೆಗೆದುಕೊಂಡು ಹೋಗುವಾಗ ಹೆಲ್ಮೆಟ್ ತಪ್ಪದೆ ಬಳಸಲು ತಿಳಿಸಿದರು