
ಮುನವಳ್ಳಿ,ಏ6 : ಪಟ್ಟಣದ ಸಾಯಿ ನಗರದಲ್ಲಿಯ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಶ್ರೀ ಹನುಮ ಜಯಂತಿಯ ನಿಮಿತ್ಯ ಇಂದು ಬೆಳಗ್ಗೆ ರುದ್ರಾಭಿಷೇಕ, ಅಲಂಕಾರ ಪೂಜೆ, ಸಂಜೆ ಭಜನೆ ಶ್ರೀ ಪಂಚಮುಖಿ ಆಂಜನೇಯ ತೊಟ್ಟಿಲು ಕಾರ್ಯಕ್ರಮ, ಹನುಮಾನ ಚಾಲೀಸ ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ದೊಂದಿಗೆ ಕಾರ್ಯಕ್ರಮ ಮಂಗಳವಾಗುವದು ಎಂದು ದೇವಸ್ಥಾನದ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿರುವರು.