ಶ್ರೀ ಗಾಯಿತ್ರಿ ಉಪಾಸನೆ

ದಾವಣಗೆರೆ, ಏ.೭; ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಆಧ್ಯಾತ್ಮ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದಿಂದ ಕಳೆದ 23 ವರ್ಷಗಳಿಂದ ಪ್ರತೀ ತಿಂಗಳ ಹುಣ್ಣಿಮೆಯಂದು ನಗರದ ಜಯದೇವ ವೃತ್ತದ ಹತ್ತಿರವಿರುವ ಶ್ರೀ ಶಂಕರಮಠದ ಆವರಣದಲ್ಲಿ  ದವನದ ಹುಣ್ಣಿಮೆಯ ಅಂಗವಾಗಿ ಸಾಮೂಹಿಕ ಗಾಯಿತ್ರಿ ಪೂಜೆ, ಉಪಾಸನೆ ಯಶಸ್ವಿಯಾಗಿ ಅಷ್ಟೋತ್ತರ, ಮೃತ್ಯುಂಜಯ ಜಪದೊಂದಿಗೆ ಶ್ರೀ ಗಾಯತ್ರಿ ಪೂಜೆ, ಉಪಾಸನೆ ಯಶಸ್ವಿಯಾಗಿ ನಡೆಯಿತು ಎಂದು ಗಾಯತ್ರಿ ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಪೂಜಾ ಸೇವಾಕರ್ತರಾದ ಡಾ ಸುಶೀಲಮ್ಮ ಹಾಗೂ ಪ್ರೇಮ್‌ಜಿ ಪಟೇಲ್‌ರವರು ಮತ್ತು ಅವರುಗಳ ಕುಟುಂಬ ವರ್ಗದ ಈ ತಿಂಗಳ ಸೇವೆ ಯೊಂದಿಗೆ ಪರಿವಾರದ ಗೌರವಾಧ್ಯಕ್ಷ ರಾದ ಕೆ.ಹೆಚ್. ಮಂಜುನಾಥ್, ಉಪಾಧ್ಯಕ್ಷರಾದ ಡಾ. ರಮೇಶ್ ಪಟೇಲ್, ಖಜಾಂಚಿ ಪುರುಷೋತ್ತಮ ಪಟೇಲ್, ಸಂಚಾಲಕರಾದ ಭಾವನ್ನಾರಾಯಣ, ಸಮಿತಿ ಸದಸ್ಯರಾದ ವಾಸುದೇವ ವೀರಭದ್ರರಾವ್, ವಿಜಯ ಕುಮಾರ್ ಶೆಟ್ಟಿ, ಸತ್ಯನಾರಾಯಣ, ವೀರಭದ್ರಪ್ಪ ಮತ್ತು ಕುಟುಂಬ, ವಿ.ಕೃಷ್ಣಮೂರ್ತಿ, ಸತೀಶ್.ಆರ್.ಎಂ., ಪ್ರಸಾದ್, ಬಿ.ಹೆಚ್. ಶಿವಕುಮಾರ ಸ್ವಾಮಿ, ಸಂಧ್ಯಾಶೀನಿವಾಸ್ ದಂಪತಿಗಳು, ಸ್ವರ್ಣಲಾ ಪ್ರಕಾಶ್, ಜಿ.ಎನ್. ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.