ಇಂಡಿ:ಜು.10: ವಿಜಯಪೂರ ಜಿಲ್ಲೆ ಶೈಕ್ಷಣಿಕ ಕ್ರಾಂತಿಗೆ ಬಂಥನಾಳದ ಶ್ರೀಸಂಗನಬಸವಶ್ರೀಗಳ ಕೊಡುಗೆ ಅನೂನ್ಯ ಮಕ್ಕಳೇ ದೇವರು ಶಾಲೇಯ ಜೀವಂತ ದೇವರ ಗುಡಿ ಎಂಬ ಸದಾಶೇಯದಿಂದ ನೂರಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಬೆಳೆಸಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಟೀಲ ಹೇಳಿದರು. ನೂತನ ಆಯ್ಕೆಯಾದ ಶಾಸಕರಿಗೆ ಹಾಗೂ ಪ್ರತಿಭಾನ್ವೀತ ವಿಧ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮನೆಯ ಮೋದಲ ಪಾಠ ಶಾಲೆ ಜನನಿ ತಾನೇ ಮೋದಲ ಗುರು ಎನ್ನುವಂತೆ ಮಕ್ಕಳ ಭವಿಷ್ಯದಲ್ಲಿ ತಂದೆ ,ತಾಯಿ ಹಾಗೂ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು ವಿಧ್ಯಾರ್ಥಿಗಳ ಭಾವಿ ಭವಿಷ್ಯಕ್ಕೆ ಶಾಲೆಗಳಲ್ಲಿ ಗುರು ನೀಡಿದ ಸಂಸ್ಕಾರ ಜೀವನದ ಕೊನೆಯವರೇಗೂ ಶಾಶ್ವತ ನೆಲೆಸುತ್ತದೆ. ವಿಧ್ಯಾರ್ಥಿಗಳು ಬೆಣ್ಣೆ ಮುದ್ದೆ ಇದ್ದ ಹಾಗೆ ಅದಕ್ಕೆ ಗುರುಗಳು ಶಾಲೆಯಲ್ಲಿ ಒಳ್ಳೇಯ ಸಂಸ್ಕಾರ ನೀಡಿದರೆ ಭವಿಷ್ಯದ ಉತ್ತಮ ನಾಗರೀಕರಾಗಲು ಸಾಧ್ಯೆ. ಹಿಂದುಳಿದ ಪ್ರದೇಶ ಈ ಭಾಗದಲ್ಲಿ ಶತಮಾನಗಳಿಂದ ಒಂದು ಕಪ್ಪು ಚುಕ್ಕೆ ಇಲ್ಲದೆ ಶಿಕ್ಷಣದ ಹಸಿವನ್ನು ನಿಗಿಸುತ್ತಾ ಸದಾ ಅತ್ಯಂತ ಕಡುಬಡವರಿಗೆ ಶಿಕ್ಷಣ ಒದಗಿಸಿ ಸಮಾಜದಲ್ಲಿ ಒಳ್ಳೇಯ ಹೆಸರು ಪಡೆದಿದೆ. ಶ್ರೀಶಾಂತೇಶ್ವರ ವಿಧ್ಯಾಸಂಸ್ಥೆ ಅತ್ಯೆಂತ ಗುಣಮಟ್ಟದ ಶಿಕ್ಷಣ ಸಂಸ್ಥೆಯಾಗಿದ್ದು ಇಲ್ಲಿ ಕಲಿತ ಅನೇಕ ವಿಧ್ಯಾರ್ಥಿಗಳು ದೇಶದ ವಿದೇಶದಲ್ಲಿ ಉನ್ನತಮಟ್ಟದ ಹುದ್ದೆ ಹೊಂದಿದ್ದು ಇದಕ್ಕೆ ಶ್ರೀಶಾಂತೇಶ್ವರನ ಕೃಪಾರ್ಶೀವಾದ ಈ ಶಿಕ್ಷಣ ಸಂಸ್ಥೆ ಇನ್ನು ಹೆಮ್ಮರವಾಗಿ ಬೆಳೆಯಲಿ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ ಶ್ರೀಶಾಂತೇಶ್ವರ ವಿಧ್ಯಾಸಂಸ್ಥೆಯಲ್ಲಿ ನಾನೂ ಕೂಡಾ ಶಿಕ್ಷಣ ಪಡೇದಿರುವೆ ಇಲ್ಲಿನ ಗುರುಗಳ ಆರ್ಶೀವಾದದಿಂದ ಒಳ್ಳೇಯ ಬದುಕು ಮಾನವೀಯ ಮೌಲ್ಯಗಳು ಕಲಿತ್ತಿರುವೆ. ಶ್ರೀ ಭಂಥನಾಳದ ಶ್ರೀಸಂಗನಬಸವ ಶ್ರೀಗಳ ಕೃಪಾರ್ಶೀವಾದಿಂದ ಈ ಸಂಸ್ಥೆ ಸಾಕಷ್ಟು ಬೆಳವಣಿಗೆಯಾಗಿದೆ ಶ್ರೀಗಳ ನಾಮಸ್ಮರಣೆ ಸದಾ ಇರಲಿ ಎಂಬ ಸದಾಶೇಯದೊಂದಿಗೆ ಪುತ್ಥಳಿ ನಿರ್ಮಾಣಕ್ಕೆ ಸಹಾಯ ಸಹಕಾರ ನೀಡುವ ಭರವಸೆ ನೀಡಿದರು.
ಗೋಳಸಾರದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ದಿವ್ಯಸಾನಿಧ್ಯವಹಿಸಿ ಆರ್ಶೀವಚನ ನೀಡಿದರು.
ನಿರ್ದೇಶಕ ಅಜೀತ ಧನಶೇಟ್ಟಿ, ಸಂಸ್ಥೆಯ ಅಧ್ಯಕ್ಷ ದೀಪಕ ದೋಶಿ, ಪ್ರಭಾಕರ ಬಗಲಿ, ನೀಲಕಂಠಗೌಡ ಪಾಟೀಲ, ಭೀಮನಗೌಡ ಪಾಟೀಲ, ಸಿದ್ದಣ್ಣಾ ತಾಂಬೆ, ಚಂದ್ರಕಾಂತ ದೇವರ, ಸಚೀನಕುಮಾರ ಗಾಂಧಿ, ಶಾಂತು ಶಿರಕನಹಳ್ಳಿ, ವರ್ಧನ ದೋಶಿ, ಶಾಂತಪ್ಪ ತೆನ್ನಳ್ಳಿ, ವಿವಿಧ ವಿಭಾಗಗಳ ಸಂಸ್ಥೆಯ ಪ್ರಾಚಾರ್ಯರು. ಶಿಕ್ಷಕರು, ಉಪನ್ಯಾಸಕ ವರ್ಗ ಸಿಬ್ಬಂದಿ ಉಪಸ್ಥಿತರಿದ್ದರು.
ಉಪನ್ಯಾಸಕ ಜಯಪ್ರಕಾಶ ಸ್ವಾಗತಿಸಿ, ಮುಖ್ಯಗುರು ರಾಘವೇಂದ್ರ ಕುಲಕರ್ಣಿ ನಿರೂಪಿಸಿ,ವಂದಿಸಿದರು.