ಶೀಗೇನಹಳ್ಳಿ ಗ್ರಾಮದ ರೈತ ಮಹಿಳೆ ಆತ್ಮಹತ್ಯೆ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜು.17 ತಾಲೂಕಿನ ಸೀಗನಹಳ್ಳಿ ಎರಡು ಗ್ರಾಮದ ರೈತ ಮಹಿಳೆ ಕೊಳ್ಳಿ ಅನ್ನಕ್ಕ (60) ಇವರು ಸಾಲದ ಹೊರೆಯಿಂದ  ಬೇಸತ್ತು ಶನಿವಾರ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 ವ್ಯವಸಾಯಕ್ಕಾಗಿ ತಂಬ್ರಹಳ್ಳಿಯ ಎಸ್ ಬಿ ಐ ನಲ್ಲಿ 3.5 ಲಕ್ಷ ಸಾಲ ಮಾಡಿದ್ದರೆಂದು ಸಾಲ ಮರುಪಾವತಿ ಮಾಡದೇ ಇರುವಾಗ ಬ್ಯಾಂಕಿನವರು ವಸೂಲಾತಿಯ ನೋಟೀಸ್ ನೀಡಿದ್ದಕ್ಕಾಗಿ  ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ  ಪುತ್ರ ಕೊಳ್ಳಿ ಮರಡ್ಡಿ ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.