ಶಿವದೂತ ಗುಳಿಗ ಪೋಸ್ಟರ್ ಬಿಡುಗಡೆ  

ದಾವಣಗೆರೆ. ಮಾ.೭;  ಎಪ್ರಿಲ್ 11 ರಂದು ಸವಿಡೈನ್ ಮಹೇಶ್ ಶೆಟ್ಟಿ ಗೆಳೆಯರ ಬಳಗದ ಆಶ್ರಯದಲ್ಲಿ ನಡೆಯುವ ದಾವಣಗೆರೆ ನಗರದ ಶಿವಯೋಗಿ ಮಂದಿರದ ಆವರಣದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಆಯೋಜಿಸಿರುವ ವಿಜಯಕುಮಾರ್ ಕೊಡಿಯಲ್ ಬೈಲ್ ನಿರ್ದೇಶನದ,  ಕಾಂತಾರ ಕನ್ನಡ ಚಲನಚಿತ್ರದ ಖ್ಯಾತಿಯ ಕಲಾಸಂಗಮ ಕಲಾವಿದರಾದ ಸ್ವರಾಜ್ ಶೆಟ್ಟಿ ಅಭಿನಯಿಸುವ ” ಶಿವದೂತ ಗುಳಿಗ ” ಎಂಬ ವಿಭಿನ್ನ ಶೈಲಿಯ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ. ಈ ” ಶಿವದೂತ ಗುಳಿಗ ” ನಾಟಕದ ಪೋಸ್ಟರ್ ನ್ನು ದಾವಣಗೆರೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಸಿ. ಬಿ. ರಿಷ್ಯಂತ್ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ಮಹೇಶ ಶೆಟ್ಟಿ, ರಾಜು ಭಂಡಾರಿ, ಶ್ರೀಕಾಂತ್ ಬಗರೆ ಉಪಸ್ಥಿತರಿದ್ದರು .