ಶಿವದಾಸ್ ಘೋಷ್‌ ಜನ್ಮ ಶತಮಾನೋತ್ಸವ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.22: ಮಹಾನ್ ಮಾರ್ಕ್ಸ್ ವಾದಿ ಚಿಂತಕ ಶಿವದಾಸ್ ಘೋಷ್‌ರವರ ಜನ್ಮ ಶತಮಾನೋತ್ಸವದ ಅಂಗವಾಗಿ ಇಂದು ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷ  ನಗರ  ಕಛೇರಿಯಲ್ಲಿ ಘೋಷ್ ಅವರ ಸಾಧನೆ ಕುರಿತು ಉಪನ್ಯಾಸ ನೀಡಲಾಯ್ತು.
ಪಕ್ಷದ  ಜಿಲ್ಲಾ ಕಾರ್ಯದರ್ಶಿ ರಾಧಕೃಷ್ಣ ಉಪಾಧ್ಯಾಯ ಮಾತನಾಡಿ, ಭಾರತದ ನೆಲದಲ್ಲಿ ನೈಜ ಕಮ್ಯುನಿಸ್ಟ್ ಪಕ್ಷ ಎಸ್ ಯು ಸಿ ಐ. ಸಿ ಸ್ಥಾಪನೆ ಮಾಡಿದ  ಶಿವದಾಸ್ ಘೋಸ್ ರವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಆಗಸ್ಟ್ 5 ರಿಂದ ಇಡೀ ದೇಶದಾದ್ಯಂತ ವರ್ಷಪೂರ್ತಿ ,  ಅತ್ಯಂತ  ಆಚರಿಸಲಾಗುತ್ತಿದೆ.
ತಮ್ಮ 13ನೇ ವಯಸ್ಸಿಗೆ ಸ್ವಾತಂತ್ರ್ಯ ಹೋರಾಟದ ಕಣದಲ್ಲಿ ಧುಮುಕಿದ ಘೋಷ್, ಕ್ರಾಂತಿಕಾರಿಗಳ  ಗುಂಪಾದ ಅನುಶೀಲನ್ ಸಮಿತಿಯಲ್ಲಿ ಸಕ್ರಿಯ ರಾಗಿದ್ದರು ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರು 3 ವರ್ಷಗಳ ಕಾಲ ಸೆರೆಮನೆ ವಾಸವನ್ನು ಸಹ ಅನುಭವಿಸಿದರು ಆದರೆ ಲಕ್ಷಾಂತರ ಶೋಷಿತ ಜನರ ತ್ಯಾಗ ಬಲಿದಾನದ ಫಲವಾಗಿ ದೊರೆಯುತ್ತಿರುವ ಸ್ವಾತಂತ್ರ್ಯವೂ ಟಾಟಾ, ಬಿರ್ಲಾ ಗಳಂತಹ ಬಂಡವಾಳಶಾಹಿಗಳ ಕೈವಶವಾಗುತ್ತಿರುವುದನ್ನು ಕಂಡು ಅವರ ಮನಸ್ಸು ವೇದನೆಗೊಳ ಪಟ್ಟಿತು ಸ್ವಾತಂತ್ರ್ಯ ಚಳುವಳಿಯಲ್ಲಿ ಸಂಧಾನ ಪರವಾದ ನಾಯಕತ್ವವು ಮೆಲುಗೈ ಪಡೆದ ಪರಿಣಾಮವಾಗಿ ರಾಜಕೀಯ ಅಧಿಕಾರವನ್ನು ಈ ದೇಶದ ಶೋಷಕ ಬಂಡವಾಳಶಾಹಿ ವರ್ಗ ಕಬಳಿಸಿತು ರಾಜಿ ರಹಿತ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ನೇತಾಜಿ ಸುಭಾಷ್ ಚಂದ್ರ ಬೋಸ್ ರಂತವರ ಕನಸಿನ ಶೋಷಣಾ ರಹಿತ ಸಮಾಜವಾದ, ಕನಸಾಗಿಯೇ ಉಳಿಯಿತು.
ಬಂಡವಾಳ ಶಾಹಿ ವ್ಯವಸ್ಥೆಯನ್ನು ತೊಲಗಿಸಿ ಸಮಾಜವಾದವು ಈ ದೇಶದ ನೆಲದಲ್ಲಿ ಸ್ಥಾಪಿಸಲು ನಿಜವಾದ ಕಮ್ಯುನಿಸ್ಟ್ ಪಕ್ಷದ ಅವಶ್ಯಕತೆಯನ್ನು ಮನಗಂಡು , ಅದನ್ನು ಕಟ್ಟುವ ಅತ್ಯಂತ ತ್ರಾಸದಾಯಕ  ಹೋರಾಟವನ್ನು ಘೋಷ್  ಕೈಗೊಂಡರು.  ಮಾರ್ಕ್ಸ್ ವಾದಿ ವಿಜ್ಞಾನವನ್ನು  ಈ ದೇಶದ ವಿಶಿಷ್ಟ ಪರಿಸ್ಥಿತಿಗೆ ಅಳವಡಿಸಿ ಜೀವನದ ಎಲ್ಲಾ ವಿಷಯಗಳನ್ನು ಒಳಗೊಂಡ ಒಂದು ಸಮಗ್ರವಾದ ಸಿದ್ಧಾಂತವನ್ನು  ಅಭಿವೃದ್ಧಿಪಡಿಸಿದರು
ಬೆರಳೆಣಿಕೆಯ ಕಾರ್ಯಕರ್ತ ರೊಂದಿಗೆ ಸೇರಿ 1948 ಏಪ್ರಿಲ್ 24ರಂದು ಈ ನೆಲದಲ್ಲಿ ಒಂದು ನೈಜ ಕಮ್ಯುನಿಸ್ಟ್ ಪಕ್ಷ ಸ್ಥಾಪನೆ ಮಾಡಿ ಒಂದು ಹೊಸ ಇತಿಹಾಸಕ್ಕೆ ನಾಂದಿ ಹಾಡಿದರು.
ಡಾ: ಪ್ರಮೋದ್  ಮಾತನಾಡಿ, ನಮ್ಮ ದೇಶದಲ್ಲಿ ಕಾಂಗ್ರೇಸ್. ಬಿಜೆಪಿ ಪಕ್ಷ ಸೇರಿದಂತೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಜನತೆಯ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಬದಲಾಗಿ ದೇಶದ ಜನತೆಯನ್ನು ಸಂಕಷ್ಟಕ್ಕೆ ನೂಕಿವೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ಖಾಸಗಿಕರಣ, ಶಿಕ್ಷಣ ವ್ಯಾಪಾರಿಕರಣ ಮತ್ತು ನಿರುದ್ಯೋಗ, ಮಹಿಳೆಯರ ಮೇಲಿನ ಅಗೌರವಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇವೆ, ಇಂತಹ ಸಂದರ್ಭದಲ್ಲಿ ಸುಳ್ಳು ಆಶ್ವಾಸನೆಗಳ ಮೂಲಕ ಅಧಿಕಾರಕ್ಕೆ ಬಂದ ಪಕ್ಷಗಳು ಬಂಡವಾಳ ಶಾಹಿಗಳ ಏಜೆಂಟ್ ಗ
ಳಾಗಿ ಕೆಲಸ ಮಾಡುತ್ತಿವೆ, ಹಾಗೂ ಜನ ವಿರೋಧಿ ನೀತಿಗಳನ್ನು ತರುತ್ತಿವೆ, ಇಂತಹ ಸಮಸ್ಯೆಗಳಿಗೆ ಕೊನೆ ಹಾಕಲು ಒಂದೇ ಒಂದು ಮಾರ್ಗವೆಂದರೆ ದೇಶದ ಜನತೆ ತಮ್ಮನ್ನು ತಾವು ಕಾರ್ಮಿಕ ವರ್ಗದ ಚಳುವಳಿ ಯೊಂದಿಗೆ ಬೆಸೆದುಕೊಂಡು ಬಂಡವಾಳ ಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸುವುದು ಒಂದೇ ಜನತೆಯ ಮುಂದೆ ಇರುವ ದಾರಿ ಎಂದು ಜನತೆಗೆ ಕರೆನೀಡಿದರು.
ಪಕ್ಷದ ಮುಖಂಡರುಗಳಾದ  ಗೋವಿಂದ್,  ಎ.ದೇವದಾಸ್ ಎ. ಶಾಂತಾ, ಡಿ. ನಾಗಲಕ್ಷ್ಮಿ ಆರ್. ಸೋಮಶೇಖರ್ ಗೌಡ  ಮುಂತಾದವರು   ಉಪಸ್ಥಿತರಿದ್ದರು.