
ಶಹಾಪೂರ:ಸೆ.6:ಜಗತ್ತಿನ ಎಲ್ಲಾ ಹುದ್ದೆಗಳಲ್ಲಿಯು ಶಿಕ್ಷಕ ಹುದ್ದೆ ಅತ್ಯಂತ ಪವಿತ್ರ ಮತ್ತು ಗೌರಯುತವಾದದ್ದು ಎಂದು ಬಸವಪ್ರಭು ವಿದ್ಯಾವರ್ಧಕ ಸಂಸ್ಥೆಯ ಮುಖ್ಯಸ್ಥ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು. ರಂಗಂಪೇಟೆಯ ಬಸವೇಶ್ವರ ಕಾಲೆಜಿನಲ್ಲಿ ಇಂದು ಆಯೋಜಿಸಿದ್ದ ಶಿಕ್ಷಕರ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಗತ್ತಿನ ಅತ್ಯಂತ ಮಹತ್ವದ ಹುದ್ದೆ ಮತ್ತು ಉದ್ಯೋಗಗಳಲ್ಲಿ ಶಿಕ್ಷಕ ವೃತ್ತಿಗೆ ತನ್ನದೆ ಆದ ಪಾವಿತ್ರತೆ ಹಾಗೂ ಗೌರವವಿದೆ ಆ ಕಾರಣದಿಂದ ರಾಷ್ಟ್ರಪತಿ, ಉಪರಾಷ್ಟ್ರಪತಿ ಹುದ್ದೆ ನಿಭಾಯಿಸಿದಂತಹ ಮಹಾನ್ ಸಾಧಕರು ಕೂಡ ಮರಳಿ ಶಿಕ್ಷಕ ವೃತ್ತಿಗೆ ಬಂದು ಸೇವೆ ಸಲ್ಲಿಸಿದ ಉದಾಹರಣೆ ನಮಗೆ ಸಿಗುತ್ತದೆ. ಇಂದು ಸ್ಪರ್ದಾತ್ಮಕ ಯುಗ ಪ್ರತಿಯೊಂದರಲ್ಲು ಸ್ಪರ್ದೆ ಇರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ನಾವು ಉತ್ತಮ ಗುರಿ, ಉದ್ದೆಶ, ಸಾಧಿಸುವ ಛಲ, ಉತ್ತಮ ಅಭ್ಯಾಸ ಬೆಳಸಿಕೊಳ್ಳಬೆಕಾಗಿದೆ ಆ ದಿಶೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಪ್ರಶ್ನಿಸಿದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೆಳಿದರು. ಕಾಲೇಜಿನ ಪ್ರಾಂಶುಪಾಲರಾದ ವಿರೇಶ ಹಳಿಮನಿ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಲಭೀಮ ಪಾಟೀಲ್, ಮಾನಪ್ಪ ರುಕ್ಮಾಪೂರ, ಶೃತಿ ಹಿರೇಮಠ, ಮೇಘಾ ರಂಗಂಪೇಟ ವೇದಿಕೆ ಮೇಲಿದ್ದರು, ಗುರುಸ್ವಾಮಿ ಹಿರೇಮಠ ನಿರೂಪಿಸಿ ವಂದಿಸಿದರು.