(ಸಂಜೆವಾಣಿ ವಾರ್ತೆ)
ವಿಜಯಪುರ :ಜು.15: ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಬಹಳಷ್ಟು ಪವಿತ್ರವಾದದ್ದು, ನೀವೇಲ್ಲರೂ ಶಿಕ್ಷಕ ವೃತ್ತಿ ಪಡೆದುಕೊಂಡವರು ಪುಣ್ಯವಂತರು ಎಂದು ನೂತನ ಉಪ ನಿರ್ದೇಶಕರಾದ ಎನ್.ಎಚ್. ನಾಗೂರ ಹಳಿದರು.
ಅವರು ಶಿಕ್ಷಕರ ಬಳಗ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ನಿವೃತ್ತಿ ಶಿಕ್ಷಕರಾದ ಶಿವಾನಂದ ಗುಡ್ಡೋಡಗಿ ಅವರು ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ವಿಜಯಪುರ ಜಿಲ್ಲೆ ಶೈಕ್ಷಣಿಕ ಅಭಿವೃದ್ದಿ ಕಡೆಗೆ ಸಾಗುತ್ತಿದ್ದು, ತಮ್ಮೆಲ್ಲರ ಶ್ರಮದಿಂದ ಕೆಲವೇ ದಿನಗಳಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಹೆಗಲ ಮೇಲೆ ಇದೆ ಎಂದು ಹೇಳಿದರು.
ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ಅದರ ಅಳಿವು-ಉಳಿವು ಶಿಕ್ಷಕರ ಮೇಲೆ ನಿಂತಿದೆ. ನಿಜವಾಗಲೂ ಶಿವಾನಂದ ಗುಡ್ಡೋಡಗಿ ಅವರು ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪಾಸಿಂಗ್ ಪ್ಯಾಕೇಜ್ ಮಾಡಿ ಮಕ್ಕಳು ತೇರ್ಗಡೆ ಹೊಂದಲು ಬಳಷ್ಟು ಸಹಾಯ ಮಾಡಿದ್ದು, ಶ್ಲಾಘನೀಯವಾದದ್ದು ಎಂದು ಹೇಳಿದರು.
ಅಭಿನಂದನಾ ಸ್ವೀಕಾರ ಮಾಡಿ ಮಾತನಾಡಿದ ನಿವೃತ್ತ ಶಿವಾನಂದ ಗುಡ್ಡೋಡಗಿ ಅವರು ನನ್ನ ಸೇವಾವಧಿಯಲ್ಲಿ ಸಾಕಷ್ಟು ಜನ ಸಹಾಯ ಸಹಕಾರ ಮಾಡಿ ಋಣ ಭಾರವನ್ನು ನಾನು ಎಂದೂ ಮರೆಯಲು ಸಾಧ್ಯವಾಗಿಲ್ಲ ಎಂದು ಹೇಳಿದರು. ನನ್ನ ಅವಧಿಯಲ್ಲಿ ಎಸ್.ಎಸ್.ಎಲ್.ಸಿ. ಸ್ಕೋರಿಂಗ್/ ಪಾಸಿಂಗ್ ಸತತವಾಗಿ 5 ವರ್ಷ ತರುವಲ್ಲಿ ನಮ್ಮ ಜಿಲ್ಲೆಯ ಶಾಲೆಯ ಶಿಕ್ಷಕರಿಗೆ ಒಂದು ಮಾರ್ಗದರ್ಶನ ಕೈಪಿಡಿ ಮಾಡಿ ‘ಜಿ ಶಂಕರ್ ಟ್ರಸ್ಟಿನ ಸಹಾಯದಿಂದ ಹಾಗೂ ಗೋವಿಂದ ಕಾರಜೋಳರವರ ಸಹಯೋಗದೊಂದಿಗೆ ಈ ಕೈಪಿಡಿ ಎಲ್ಲರಿಗೂ ಅನುಕೂಲವಾಗಿತ್ತು. ಮತ್ತು ಮುಂದಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕಗಳನ್ನು ತೆಗೆದು ಪುಸ್ತಕ ರಚನೆ ಮಾಡಲಾಗಿತ್ತು. ತಾವು ಸೇವೆ ಸಲ್ಲಿಸಿದ ಸಜ್ಜನ ಗಾಣಿಗರ ಸೇವಾ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮ ಅಧ್ಯಕ್ಷತ ವಹಿಸಿ ಮಾತನಾಡಿದ ನಿವೃತ್ತ ಅಪರ ಆಯುಕ್ತರಾದ ಎ.ಎನ್. ಪಾಟೀಲ ಸಾಹೇಬರು, ಶಿವಾನಂದ ಗುಡ್ಡೋಡಗಿ ಅವರು ಮಾತನಾಡಿ ಮಾತಿಗಿಂತ ಕೃತಿ ಮೇಲು ಅವರ ಸೇವಾ ಅವಧಿಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ನಿಜವಾಗಲೂ ಸನ್ಮಾನಕ್ಕೆ ಅಬಿನಂದನಾರ್ಹರು. ಅವರು ಸಮಾಜದಲ್ಲಿ ಇನ್ನಷ್ಟು ಕಾರ್ಯ ಮಾಡಬೇಕು. ಎಂದು ಹೇಳಿದರು.
ಕಾರ್ಯಕ್ರಮಲ್ಲಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ, ಇಂಡಿ ಬಿ.ಇ.ಓ. ವಸಂತ ರಾಠೋಡ, ವಯಸ್ಕರ ಶಿಕ್ಷಣ ಶಿಕ್ಷಣಾಧಿಕಾರಿ ವಿಜಯ ಆಲಗೂರ, ಮಾತೋಶ್ರೀ ಪಮ್ಮಕ್ಕಾ ಗುಡ್ಡೋಡಗಿ, ರಾಜಶ್ರೀ ಗುಡ್ಡೋಡಗಿ ಎನ್.ಜಿ.ಓ. ಅಧ್ಯಕ್ಷರಾದ ಸುರೇಶ ಶೇಡಶ್ಯಾಳ, ಶಿವರಾಜ ಬಿರಾದಾರ, ಸಿದ್ದು ಹಂಚಿನಾಳ, ಆರ್.ಎಸ್. ತುಂಗಳ, ಅಶೋಕ ಹಂಚಲಿ, ವ್ಹಿ.ವ್ಹಿ. ಒಣರೊಟ್ಟಿ, ವಿಜಯಕುಮಾರ ಹತ್ತಿರ, ಶಿವಾನಂದ ಮಂಗಾನವರ, ಬಿ.ಬಿ. ದೂರನಳ್ಳಿ, ಎಸ್.ಎಸ್. ಜೇವೂರ, ಎಚ್.ಕೆ. ಬೂದಿಹಾಳ, ಸಂತೋಷ ಕುಲಕರ್ಣಿ, ಎಲ್.ಬಿ.ಪಾಟೀಲ, ಉಪಸ್ಥಿತರಿದ್ದರು.
ಅಶೋಕ ಹಂಚಲಿ ಪ್ರಾಸ್ತಾವಿಕ ಮಾತನಾಡಿದರಿ. ಜಗದೀಶ ಬೋಳಸೂರ ನಿರೂಪಿಸಿದರು.