(ಸಂಜೆವಾಣಿ ವಾರ್ತೆ)
ಬಳ್ಳಾರಿ: ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್ ಅವರು ನಿನ್ನೆ ನಗರ ಕ್ಷೇತ್ರದ ನೂತನ ಶಾಸಕ ನಾರಾ ಭರತ್ ರೆಡ್ಡಿ ಅವರ ಕಚೇರಿಗೆ ತೆರಳಿ ಸನ್ಮಾನಿಸಿ. ಯುವ ಶಾಸಕರಾಗಿರುವ ನೀವು ಭವಿಷ್ಯದಲ್ಲಿ ಉನ್ನತ ನಾಯಕರಾಗಿ ಬೆಳೆಯಿರಿ. ಆ ಮೂಲಕ ಮತ್ತಷ್ಟು ಜನ ಸೇವೆ ಮಾಡಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಜಿಲ್ಲಾ ಅಧ್ಯಕ್ಷ ಚಾನಾಳ್ ಶೇಖರ್ ಉಪಸ್ಥಿತರಿದ್ದರು.