ಶಾಲೆಗಳಲ್ಲಿ ಸೇವಾದಳದ ಶಿಕ್ಷಣ ಕಡ್ಡಾಯವಾಗಬೇಕು;  ಬಿ. ಎನ್ ಮಲ್ಲೇಶ್

ದಾವಣಗೆರೆ. ಫೆ.೨೩; ದೇಶದಲ್ಲಿ ರಾಷ್ಟ್ರೀಯ ಭಾವೈಕ್ಯತೆ, ದೇಶಭಕ್ತಿ, ಸೇವಾ ಮನೋಭಾವನೆ ಕೊರತೆಯಾಗಿದೆ ಶಾಲೆಗಳಲ್ಲಿ ಮಕ್ಕಳಿಗೆ ಸೇವಾದಳದ ಶಾರೀರಿಕ ಯೋಗ ಮತ್ತು ನೈತಿಕ ಶಿಕ್ಷಣವನ್ನು  ಅಳವಡಿಸುವ ಮೂಲಕ  ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಶಿಸ್ತು ದೇಶಾಭಿಮಾನ ಸೇವಾ ಮನೋಭಾವನೆ ಮೂಡಿಸಲು ಶಾಲೆಗಳಲ್ಲಿ ಸೇವಾದಳ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕೆಂದು  ಹಿರಿಯ ಪತ್ರಕರ್ತ ಬಿ ಎನ್ ಮಲ್ಲೇಶ್ ಅಭಿಪ್ರಾಯಪಟ್ಟರು.ದಾವಣಗೆರೆಯಲ್ಲಿ ಭಾರತ ಸೇವಾದಳವು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ಜಿಲ್ಲಾ ಮಟ್ಟದ ಸಹಾಯಕ ಯೋಗ ನೈತಿಕ ಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಪರಾಧ ಕೃತ್ಯಗಳಲ್ಲಿ ತೊಡಗಿದವರನ್ನು ಸಂರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ, ಶಿಕ್ಷಕರು ಮಕ್ಕಳಿಗೆ ಯೋಗ್ಯ ಶಿಕ್ಷಣವನ್ನು ನೀಡಿ ಉತ್ತಮ ನಾಗರೀಕರನ್ನಾಗಿ ಮಾಡಿದಲ್ಲಿ ಅವರ ಸೇವೆ ಸಾರ್ಥಕವಾಗುತ್ತದೆ ಎಂದರು. ರಾಷ್ಟ್ರೀಯ ಹಬ್ಬಗಳಲ್ಲಿ ರಾಷ್ಟ್ರಧ್ವಜ  ಕಟ್ಟುವ ಬಗ್ಗೆ, ಧ್ವಜ ವಂದನೆ ವಿಚಾರ ಬಂದಾಗ ದೈಹಿಕ ಶಿಕ್ಷಕರ ಅಗತ್ಯತೆ ಕಾಣುತ್ತಿದೆ. ಸೇವಾದಳ ಇದರ ಬಗ್ಗೆ ಸಂಪೂರ್ಣ ತರಬೇತಿ ಪಡೆಯುತ್ತಿದ್ದು  ಶಿಕ್ಷಕರು ಸಂಘ ಸಂಸ್ಥೆಯವರು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಅಂಬಣ್ಣ  ಮಾತನಾಡಿ ಶಾಲೆಗಳಲ್ಲಿ ನೈತಿಕ ಶಿಕ್ಷಣದ ಅಗತ್ಯವಿದೆ  ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಸೇವಾದಳ ಶಿಕ್ಷಕರು ಮಕ್ಕಳಿಗೆ ಶಾರೀರಿಕ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವನ್ನು ನೀಡಬೇಕೆಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸತ್ಯನಾರಾಯಣ್ ಎಲ್ಲಾ ಕಾರ್ಯದರ್ಶಿ ಅರವಿಂದ್ ಜೆ ಕೊಲಂಬಿ, ಕೋಶಾಧ್ಯಕ್ಷರಾದ  ಎಂ ರುದ್ರಯ್ಯ, ತಾಲೂಕು ಸೇವಾದಳ ಅಧ್ಯಕ್ಷ ಹಾಸಬಾವಿ ಕರಿಬಸಪ್ಪ, ಮಹಾನಗರ ಪಾಲಿಕೆ  ಸದಸ್ಯ ಮಂಜುನಾಥ್ ಕೆ. ಬಿ. ಪರಮೇಶಪ್ಪ  ಸೇರಿದಂತೆ ಜಿಲ್ಲಾ ಸಮಿತಿ ಮತ್ತು ತಾಲೂಕು ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆನ್ನಪ್ಪ ಹೆಚ್ ಪಲ್ಲಾಗಟ್ಟಿರವರು ವಹಿಸಿದ್ದರು.