ಅಥಣಿ : ಜೂ.25:ನಾಲ್ಕನೇ ಬಾರಿಗೆ ರಾಜ್ಯದಲ್ಲಿಯೇ ಅತಿ ಹೆಚ್ಚಿನ ಮತಗಳಿಂದ ಶಾಸಕರಾಗಿ ಆಯ್ಕೆಯಾದ ಲಕ್ಷ್ಮಣ ಸವದಿ ಅವರಿಗೆ ತಾಲೂಕಿನ ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥರಾದ ಡಿ.ಬಿ.ನದಾಫ, ಹಾಗೂ ಸುರೇಶ ಸವದಿಯವರ ನೇತೃತ್ವದಲ್ಲಿ, ಹೃತ್ಪೂರ್ವಕವಾಗಿ ಸನ್ಮಾನಿಸಿ ಗೌರವಿಸಲಾಯಿತು,
ಈ ಸಂದರ್ಭದಲ್ಲಿ ಪರಮಾನಂದ ತೇಲಿ, ರವೀಂದ್ರ ಬೊಮ್ಮಣ್ಣವರ, ಇಸ್ಮಾಯಿಲ್ ಕರಿಶಾಬು, ರಾಮು ಕುಂಬಾರ, ಚಂದ್ರಕಾಂತ ಸಂಕ್ರಟ್ಟಿ, ಅಶೋಕ ಐಗಳಿ, ಧರೇಪ್ಪಾ ಚುನಾರ, ಅಜೀತ ಹಳ್ಳೂರ, ಪಿ.ಬಿ. ಗುಡೊಡಗಿ, ಭರಮಗೌಡ ಪಾಟೀಲ, ಬಾಹುಬಲಿ ಬೊಮ್ಮಣ್ಣವರ, ರಿಯಾಜಅಹ್ಮದ ನದಾಫ, ಅಪ್ಪಾಸಾಬ ಕಾಂಬಳೆ, ಶಿಕ್ಷಕರಾದ ಮುಕುಂದ ತೀರ್ಥ, ಸುಲ್ತಾನ ಕೋರ್ಬು, ಶಿವಪುತ್ರ ಪಾಲಬಾಂವಿ, ಮಹಮ್ಮದ ನದಾಫ ಹಾಗೂ ಸಮಸ್ತ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.