
ಶಹಾಬಾದ:ಜು.3:ನಗರದಲ್ಲಿ ಕರೋನಾಗಿಂತ ಮುಂಚೆ ಓಡುತ್ತಿದ್ದ ಎಲ್ಲಾ ಪ್ಯಾಸೇಂಜ್ರ ರೈಲು, ಕೋನಾಗಿಂತ ಮುಂಚೆ ನಿಲ್ಲುತ್ತಿದ್ದ ಎಲ್ಲಾ ಎಕ್ಸಪ್ರೇಸ್ ರೈಲುಗಳನ್ನು ನಿಲ್ಲಿಸುವಂತೆ ಆಗ್ರಹಿಸಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಶಹಾಬಾದ್ ಅಭಿವೃದ್ದಿ ಹೋರಾಟ ಸಮಿತಿ ವತಿಯಿಂದ ಪ್ರತ್ಯೇಕ ಮನವಿಯನ್ನು ಅಪರ ಜಿಲ್ಲಾಧಿಕಾರಿ ರಾಚಪ್ಪ ಅವರ ಮೂಲಕ ಸಲ್ಲಿಸಲಾಯಿತು.
ಕಲ್ಯಾಣ ಕರ್ನಾಟಕ ಗ್ರಾಹಕರ ವೇದಿಕೆ ಸುನೀಲ ಕುಲಕರ್ಣಿ, ಆನಂದ ದೇಶಪಾಂಡೆ, ಕಲ್ಯಾಣ ನಾಡು ವಿಕಾಸ ವೇದಿಕೆಯ ಮುತ್ತಣ್ಣ ನಾಡಗೇರಿ ನೇತೃತ್ವದಲ್ಲಿ ಕಲಬುರಗಿ ರೈಲ್ವೆ ವಿಭಾಗ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಸಿದ ಧರಣಿಯ ನಂತರ, ಶಹಾಬಾದ ಅಭಿವೃದ್ದಿ ಹೋರಾಟ ಸಮಿತಿಯಿಂದ ಸಲ್ಲಿಸಿದ ಮನವಿಯಲ್ಲಿ ಕರೋನಾ ಗಿಂತ ಮುಂಚೆ ಓಡುತ್ತದ್ದ ಸೋಲಾಪುರ ಗುಂತಕಲ್ ಪ್ಯಾಸೇಂಜರ್, ಕಲಬುರಗಿ ಹೈದ್ರಾಬಾದ ಪ್ಯಾಸೇಂಜರ್, ಸಿಕಂದರಾಬಾದ್ ಕಲಬುರಗಿ ಮೆಮೋ ರೈಲುಗಳನ್ನು ಮತ್ತೆ ಪ್ರಾರಂಭಿಸುವದು. ಎಕ್ಸಪ್ರೇಸ್ ರೈಲುಗಳಾದ ಎಲ್ಟಿಟಿ ವಿಶಾಖ ಪಟ್ಟಣಂ, ಮುಂಬೈ ಹೈದ್ರಾಬಾದ್, ಮುಂಬೈ ಚೆನೈ, ಸಿಕಂದರಾಬಾದ ರಾಜಕೋಟ್, ಕೋನಾರ್ಕ ಎಕ್ಸಪ್ರೇಸ್, ಕಾಕಿನಾಡಾ ಭಾವನಗರ, ಮುಂಬೈ ಚನೈ, ಮಧುರೈ ಮುಂಬೈ ರೈಲುಗಳನ್ನು ಶಹಾಬಾದ ರೈಲು ನಿಲ್ದಾಣದಲ್ಲಿ ನಿಲ್ಲಿಸಲು, ಹಾಗೂ ಪ್ರಯಾಣಿಕರ ಒತ್ತಡ ಹೆಚ್ಚಿರುವದರಿಂದ ಯಾದಗಿರಿ, ಕಲಬುರಗಿ ನಡುವೆ ಶಟಲ್ ರೈಲು ಪ್ರಾರಂಭಿಸಲು ಮನವಿ ಸಲ್ಲಿಸಲಾಯಿತು. ಈ ಸಂಸರ್ಭದಲ್ಲಿ ಶಹಾಬಾದ್ ಅಭಿವೃದ್ದಿ ಹೋರಾಟ ಸಮಿತಿ ಗೌರವ ಅಧ್ಯಕ್ಷ ಶಿವರಾಜ ಇಂಗಿನಶೆಟ್ಟಿ, ಅಧ್ಯಕ್ಷ ಮಹ್ಮದ ಉಬೇದುಲ್ಲಾ, ಬಾಬುರಾವ ಪಂಚಾಳ, ಮಹಾಂತೇಶ ಅವಂಟಿ ಸೇರಿದಂತೆ ಇತರರು ಇದ್ದರು.