ವೀ.ವಿ.ಸಂಘಕ್ಕೆ ನೂತನ ಅಧ್ಯಕ್ಷ ಕಾರ್ಯದರ್ಶಿ ಆಯ್ಕೆ ಸಭೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.07: ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷ ಮತ್ತು  ಕಾರ್ಯದರ್ಶಿ ಆಯ್ಕೆ ಸಭೆ ಸಂಘದ ಮೀಟಿಂಗ್ ಹಾಲ್ ನಲ್ಲಿ  ಇಂದು ನಡೆಯಿತು.
ಕಳೆದ ಬಾರಿ ಯುವಕ ವೃಂದದ ಶಾಂತನಗೌಡ,  ಕಿರಣ್, ಬೆಂಬಲದಿಂದ ಹಿರಿಯರ ಗುಂಪಿನ ಹೆಚ್.ಎಂ.ಗುರುಸಿದ್ದಸ್ವಾಮಿ ಅಧ್ಯಕ್ಷರಾಗಿ ಮತ್ತು ಬಿ.ವಿ‌‌ ಬಸವರಾಜ್ ಅವರು  ಕಾರ್ಯದರ್ಶಿಯಾಗಿದ್ದರು.
ಎರೆಡು ವರ್ಷ ಅವಧಿ ಮುಗಿದಿದ್ದು ಉಳಿದ ಒಂದು ವರ್ಷದ ಅವಧಿಗೆ ಸ್ಥಾನ ಬದಲಾವಣೆ ಬಯಸಿ ಈ ಇಬ್ಬರು ರಾಜೀನಾಮೆ ಸಲ್ಲಿಸಿದ್ದರು.
ಇಂದು ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರ ರಾಜೀನಾಮೆ ಅಂಗೀಕಾರ ಮಾಡಲಾಯ್ತು ನಂತರ  ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿ ಆಯ್ಕೆ ಪ್ರಕ್ರಿಯೆ ನಡೆದಿತ್ತು.
ಹಿರಿಯರ ತಂಡದಿಂದ ಅಧ್ಯಕ್ಷ ಸ್ಥಾನಕ್ಕೆ ಬಿ.ವಿ.ಬಸವರಾಜ್ ಮತ್ತು ಕಾರ್ಯದರ್ಶಿ ಸ್ಥಾನಕ್ಕೆ ಹೆಚ್.ಎಂ.ಗುರುಸಿದ್ದಸ್ವಾಮಿ
ಆಯ್ಕೆ ಬಯಸಿದ್ದರು.
ಯುವಕರ ಗುಂಪಿನ ಗ್ರಾಮೀಣ ಭಾಗದ ಹಗರಿಬೊಮ್ಮಹಳ್ಳಿ ತಾಲೂಕಿನ ಬ್ಯಾಲಚಿಂತೆ ಆರ್. ರಾಮನಗೌಡ   ಅಧ್ಯಕ್ಷ ಸ್ಥಾನಕ್ಕೆ ಮತ್ತು  ನಗರದ ಟಿ.ಸಿ.ವಿರೂಪಾಕ್ಷಗೌಡ ಅವರು ಕಾರ್ಯದರ್ಶಿ ಸ್ಥಾನಕ್ಕೆ ಅಯ್ಕೆ ಬಯಸಿದ್ದರಂತೆ.
ಒಟ್ಟು 30 ಸದಸ್ಯರ ಪೈಕಿ ಬಣಾಪುರದ ನಾಗಭೂಷಣ ಗೌಡ ಅವರು ಸಭೆಗೆ ಗೈರು ಹಾಜರಾಗಿದ್ದರು. ಉಳಿದ 29 ಸದಸ್ಯರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಆಂತರಂಗಿಕವಾಗಿ ತಿಳಿದ ಪ್ರಕಾರ ಯುವಕರ ಗುಂಪಿಗೆ. ಹಿರಿಯರ ಗುಂಪಿನ ಒಂದಿಬ್ಬರು ಸಹಕಾರ ಮಾಡುತ್ತಾರೆಂದು ತಿಳಿದು ಬಂದಿದೆ.